Site icon Vistara News

Murder Case: ರಸ್ತೆಯಲ್ಲಿ ಮಲಗುವ ವಿಚಾರಕ್ಕೆ ಕಿರಿಕ್‌; ಬಿಹಾರಿಯಿಂದ ನಾಲ್ವರ ಮೇಲೆ ಹಲ್ಲೆ, ಒಬ್ಬ ಸ್ಥಳದಲ್ಲೇ ಸಾವು

Kirik about sleeping on the road, Four men attacked by Bihar, one killed on spot

Kirik about sleeping on the road, Four men attacked by Bihar, one killed on spot

ಬೆಂಗಳೂರು: ಮೆಜೆಸ್ಟಿಕ್ ಸಮೀಪದ ಕಪಾಲಿ ಗಲ್ಲಿಯಲ್ಲಿ ರಸ್ತೆ ಬದಿಯಲ್ಲಿ ಮಲಗುವ ಜಾಗದ ವಿಚಾರಕ್ಕೆ ಗಲಾಟೆ ನಡೆದಿದ್ದು, ಒಬ್ಬನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಸಂದೀಪ್ (33) ಮೃತ ದುರ್ದೈವಿ ಆಗಿದ್ದಾನೆ.

ರಸ್ತೆ ಬದಿಯಲ್ಲಿ ಸಂದೀಪ್, ರವಿ, ಶಂಕರ್ ಮತ್ತು ಕೆಂಚ ಎಂಬುವವರು ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಮೊಹಮ್ಮದ್ ತೆಹಸಿನ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಗ ಈ ನಾಲ್ವರು ಸೇರಿ ಮೊಹಮ್ಮದ್‌ನನ್ನು ಥಳಿಸಿ ಕಳುಹಿಸಿದ್ದಾರೆ.

ಆರೋಪಿ ಮೊಹಮ್ಮದ್‌ ತೆಹಸಿನ್‌ ಬಂಧನ

ಹೊಡೆತ ತಿಂದವ ಮತ್ತೆ ಬಂದ

ಹೊಡೆತ ತಿಂದು ಅಲ್ಲಿಂದ ಹೋಗಿದ್ದ ಮೊಹಮ್ಮದ್‌ ಪುನಃ ಮಾರ್ಚ್ 1ರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅದೇ ಸ್ಥಳಕ್ಕೆ ಬಂದಿದ್ದಾನೆ. ಜತೆಗೆ ಕೈಯಲ್ಲಿ ಬಡಿಗೆಯನ್ನೂ ಹೊತ್ತು ತಂದಿದ್ದಾನೆ. ಬಂದವನೇ ಮಲಗಿದ್ದ ನಾಲ್ವರ ಮೇಲೆ ಏಕಾಏಕಿ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಸಂದೀಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Ramanagar Politics: ರೀ ಮಂತ್ರಿಗಳೇ ನಿಂತ್ಕೊಳ್ರಿ ಎಂದ ಡಿ.ಕೆ. ಸುರೇಶ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌ ಜತೆ ಮತ್ತೆ ಜಟಾಪಟಿ

ಸ್ಥಳಕ್ಕಾಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ರವಿ (30), ಶಂಕರ್(42) ಮತ್ತು ಕೆಂಚ ಎಂಬುವವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿ ಮೊಹಮ್ಮದ್ ತೆಹಸಿನ್ (23) ಬಿಹಾರ ಮೂಲದವನಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version