Site icon Vistara News

Murder Case: ಮಂಗಳೂರಲ್ಲಿ ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆಗೆ ಶರಣು

#image_title

ಮಂಗಳೂರು: ನಗರದ ಕಾಪಿಕಾಡ್‌ನಲ್ಲಿ ಪತ್ನಿಯ ಕೊಲೆಗೈದು (Murder Case) ಪತಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶೈಲಜಾ (64) ದಿನೇಶ್ ರಾವ್ (65) ಮೃತ ದುರ್ದೈವಿಗಳು.

ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ದಿನೇಶ್ ರಾವ್ ಅವರು ಪತ್ನಿ ಶೈಲಜಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಐದಾರು ವರ್ಷಗಳಿಂದ ನರರೋಗದ ಕಾರಣದಿಂದಾಗಿ ಪತ್ನಿ ಶೈಲಜಾ ಹಾಸಿಗೆ ಹಿಡಿದಿದ್ದರು.

ಇದನ್ನೂ ಓದಿ: ಯುವಕನ ಮೇಲೆ ಅರಶಿಣಗೆರೆ ಪೊಲೀಸರಿಂದ ಹಲ್ಲೆ, ನಿಂದನೆ; ಮರ್ಯಾದೆಗೆ ಮನನೊಂದು ವಿಷ ಸೇವನೆ, ನ್ಯಾಯಕ್ಕಾಗಿ ಕುಟುಂಬದಿಂದ ಮೊರೆ

ಇದೇ ಕಾರಣಕ್ಕೆ ನೊಂದು ಶನಿವಾರ ಬೆಳಗ್ಗೆ ಪತ್ನಿಯನ್ನು ಕೊಲೆಗೈದು ಮನೆಯ ರೂಮಿನಲ್ಲಿ ದಿನೇಶ್‌ ನೇಣು ಬಿಗಿದುಕೊಂಡಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version