Site icon Vistara News

Murder Case: ಕೈ-ಕಾಲು ಕಟ್ಟಿ, ಬಾಯಿಗೆ ಟೇಪ್ ಹಾಕಿ ಗೆಳೆಯನನ್ನೇ ಮುಗಿಸಿಬಿಟ್ಟರು!

#image_title

ಬೆಂಗಳೂರು: ಎಣ್ಣೆ ನಶೆಯಲ್ಲಿದ್ದ ಆ ಯುವಕರು ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡು, ಜತೆಗಿದ್ದ ಗೆಳೆಯನನ್ನೇ ಉಸಿರುಗಟ್ಟಿಸಿ ಹತ್ಯೆ (Murder Case) ಮಾಡಿದ್ದಾರೆ. ಸುಲೇಮಾನ್ ಹಾಗೂ ರಿಜ್ವಾನ್ ಎಂಬುವವರು ಜನಾರ್ದನ್ ಭಟ್ ಎಂಬಾತನನ್ನು ಹತ್ಯೆ ಮಾಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

ಈ ಮೂವರು ಒಂದೇ ಸಂಸ್ಥೆ ಉದ್ಯೋಗಿಗಳಾಗಿದ್ದರಿಂದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ವಿಶ್ವಾನಾಥನಗರದಲ್ಲಿರುವ ಶ್ರೀ ಸಾಯಿ ಸಮೃದ್ಧಿ ಲೇಔಟ್‌ನಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದರು. ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಈ ಮೂವರ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಕಳೆದ ಮೂರು ದಿನಗಳ ಹಿಂದೆ ಬೈಕ್‌ ಪಾರ್ಕ್‌ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಎಣ್ಣೆ ನಶೆಯಲ್ಲಿದ್ದಾಗಲೇ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸುಲೇಮಾನ್‌ ಹಾಗೂ ರಿಜ್ವಾನ್‌ ಸೇರಿ ಜನಾರ್ದನ್ ಕೈ ಕಾಲು ಕಟ್ಟಿದ್ದರೆ ಬಳಿಕ ಬಾಯಿಗೆ ಟೇಪ್ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: Bengaluru Murder Case: ಬೆಂಗಳೂರಲ್ಲಿ ನೇಪಾಳಿ ಯುವಕನ ಕೊಲೆಗೆ ಕಾರಣವಾಯ್ತು ಗಾಂಜಾ ನಶೆ; ಹಂತಕರ ಸೆರೆ

ಇತ್ತ ಹತ್ಯೆ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್ಮೆಂಟ್ ನಿವಾಸಿಗಳು ಯಲಹಂಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version