Site icon Vistara News

Murder case: ಜೈಲಿಂದ ಬಂದಿದ್ದೀನಿ, ನಾನೇ ನಿಮಗೆಲ್ಲ ಬಾಸ್‌ ಎಂದವನಿಗೆ ಚಾಕು ಹಾಕಿದ ಸ್ನೇಹಿತರು

murder case

murder case

ಬೆಂಗಳೂರು: ಇಲ್ಲಿನ ಮಹದೇವಪುರದಲ್ಲಿ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ, ತನ್ನ ಸ್ನೇಹಿತರಿಂದಲೇ (Murder Case) ಹತ್ಯೆಯಾಗಿದ್ದಾನೆ. ರೇಣುಕುಮಾರ್ (24) ಮೃತ ದುರ್ದೈವಿ. ಪ್ರಶಾಂತ್, ಶ್ರೀಕಾಂತ್, ವಸಂತ ಕುಮಾರ್ ಆರೋಪಿಗಳಾಗಿದ್ದಾರೆ.

ರೇಣುಕುಮಾರ್ ಕೊಲೆ ಯತ್ನ, ರಾಬರಿ, ಹಲ್ಲೆ ಸೇರಿದಂತೆ ಏಳು ಕೇಸ್‌ಗಳು ದಾಖಲಾಗಿದ್ದವು. ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ರೇಣುಕುಮಾರ್‌, ನೀವು ನನ್ನ ಜತೆಗೆ ಇರಬೇಕೆಂದು ಶ್ರೀಕಾಂತ್ ಮತ್ತು ಪ್ರಶಾಂತ್‌ಗೆ ಬೆದರಿಕೆಯನ್ನು ಹಾಕಿದ್ದನಂತೆ. ಒಂಟಿಯಾಗಿ ಏನಾದರೂ ಕೆಲಸ ಮಾಡಿದರೆ ನಿಮ್ಮನ್ನು ನಾನು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ ಎನ್ನಲಾಗಿದೆ.

`ಜೈಲಿಗೆ ಹೋಗಿ ಬಂದಿದ್ದೇನೆ ನಾನೇ ನಿಮಗೆಲ್ಲ ಬಾಸ್’ ಎಂದು ಈ ಇಬ್ಬರಿಗೆ ಬೆದರಿತ್ತಿದ್ದಂತೆ. ನಿನ್ನೆ ಗುರುವಾರ (ಮೇ 25) ಕೂಡ ಶ್ರೀಕಾಂತ್‌ ಮತ್ತು ಪ್ರಶಾಂತ್‌ಗೆ ರೇಣುಕುಮಾರ್‌ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇವರಿಬ್ಬರು, ರೇಣುಕುಮಾರ್‌ ಬದುಕಿದ್ದರೆ ನಮ್ಮನ್ನು ಹೊಡೆದು ಮುಗಿಸಿಬಿಡುತ್ತಾನೆ. ಹೀಗಾಗಿ ನಾವೇ ಅವನನ್ನು ಹೊಡೆದು ಮುಗಿಸಿಬಿಡೋಣ ಎಂದು ಪ್ಲಾನ್‌ ಮಾಡಿದ್ದಾರೆ.

ಇದನ್ನೂ ಓದಿ: Moral policing: ಜತೆಗೆ ಚಾಟ್ಸ್‌ ತಿಂದ ಹಿಂದು ಯುವಕ, ಮುಸ್ಲಿಂ ಯುವತಿಗೆ ಹಲ್ಲೆ; ಇಬ್ಬರು ಸೆರೆ

ಶ್ರೀಕಾಂತ್, ಪ್ರಶಾಂತ್ ಪ್ಲಾನ್‌ಗೆ ಬಂಗಾರಪೇಟೆ ಮೂಲದ ಗೆಳೆಯ ವಸಂತ್‌ನನ್ನು ಜತೆಗೆ ಸೇರಿಸಿಕೊಂಡಿದ್ದಾರೆ. ನಿನ್ನೆ ರೇಣುಕುಮಾರ್‌ನನ್ನು ಕರೆಸಿಕೊಂಡಿದ್ದು ಮೊದಲೇ ಯೋಜಿಸಿದ್ದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version