Site icon Vistara News

Murder Case | ಸೀರೆ ಜಗಳ ಬಿಡಿಸಲು ಹೋದವನು ಹೋಗಿದ್ದು ಪರಲೋಕಕ್ಕೆ!

murder case ಬಟ್ಟೆ ಜಗಳ

ಚಿಕ್ಕಬಳ್ಳಾಪುರ: ಇಲ್ಲಿನ ಗೌರಿಬಿದನೂರು ನಗರದ ಮಿಟ್ಟಹಳ್ಳಿಯ ವಾರ್ಡ್ 23ರಲ್ಲಿ ಬಟ್ಟೆ ಒಣಗಿ ಹಾಕುವ ವಿಚಾರಕ್ಕೆ ಶುರುವಾದ ಗಲಾಟೆಯು ವ್ಯಕ್ತಿಯೊಬ್ಬನ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಮನ್ಸೂರ್ ಖಾನ್ (23) ಮೃತ ದುರ್ದೈವಿ.

ಬಟ್ಟೆ ಒಣಗಿ ಹಾಕುವ ವಿಚಾರಕ್ಕೆ ಮಹಿಳೆಯರ ನಡುವೆ ಸಣ್ಣ ಗಲಾಟೆ ಶುರುವಾಗಿದೆ. ಹೆಂಗಸರ ಗಲಾಟೆ ಅತಿರೇಕಕ್ಕೆ ತಿರುಗಿದಾಗ, ಅಕ್ಕಪಕ್ಕದ ಮನೆಯ ಗಂಡಸರು ಮಧ್ಯಪ್ರವೇಶಿಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದೆ. ಇದೇ ವೇಳೆ ಮನ್ಸೂರ್‌ ಖಾನ್‌ ಮಧ್ಯ ಪ್ರವೇಶ ಮಾಡಿದ್ದಾರೆ. ಇವರು ಮಧ್ಯ ಪ್ರವೇಶ ಮಾಡಿದ್ದನ್ನು ಕಂಡ ಅಕ್ರಂ ಮತ್ತು ಗೌಸ್ಪೀರ್ ಎಂಬುಬುವರು ಗಲಾಟೆಗೆ ಇಳಿದಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಮನ್ಸೂರ್‌ ಖಾನ್‌ಗೆ ಅಕ್ರಂ ಮತ್ತು ಗೌಸ್ಪೀರ್‌ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರ ಹಲ್ಲೆಗೆ ಒಳಗಾದ ಮನ್ಸೂರ್‌ ಖಾನ್‌ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಎಸ್‌ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder Case | ಯಾರೂ ಇಲ್ಲ, ಮನೆಗೆ ಬಾ ಅಂದಳು ಪ್ರೇಯಸಿ; ಬಂದವನನ್ನು ಕೊಂದೆಸೆದರು ಕುಟುಂಬಸ್ಥರು

Exit mobile version