Site icon Vistara News

Murder Case: ಸ್ನೇಹಿತರೇ ಹಂತಕರು; ವೀಕೆಂಡ್‌ ಪಾರ್ಟಿಯಲ್ಲಿ ಕಿರಿಕ್‌, ನೇಪಾಳಿ ಯುವಕನ ಬರ್ಬರ ಹತ್ಯೆ

bangalore murder case

ಬೆಂಗಳೂರು: ಆತ ದೂರದ ನೇಪಾಳದಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದ. ಹೋಟೆಲ್‌ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ತಾನಾಯಿತು ತನ್ನ ಕೆಲಸ ಆಯಿತು ಎಂದು ಇದ್ದಿದ್ದರೆ ಜೀವಂತವಾಗಿ ಇರುತ್ತಿದ್ದ. ಆದರೆ ಸ್ನೇಹಿತರೊಂದಿಗೆ ವೀಕೆಂಡ್ ಪಾರ್ಟಿ ಮಾಡಲು ಹೋಗಿ ಸ್ನೇಹಿತರಿಂದಲೇ ಬರ್ಬರವಾಗಿ ಹತ್ಯೆಯಾಗಿ (Murder Case) ಹೋಗಿದ್ದಾನೆ.

ಮೂಲತಃ ನೇಪಾಳದ ಡೇವಿಡ್ ಎಂಬಾತ ಬೆಂಗಳೂರಲ್ಲಿ ವಾಸವಿದ್ದ. ಜೀವನ ಸಾಗಿಸಲು ಹೋಟೆಲ್‌ ಒಂದರಲ್ಲಿ ಶೇಫ್‌ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಶನಿವಾರ (ಜೂ.24) ಸಂಜೆ ಕೆಲಸ ಮುಗಿಸಿಕೊಂಡು ಹೊರ ಬಂದಿದ್ದ ಡೇವಿಡ್‌ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಲು ಪ್ಲ್ಯಾನ್‌ ಮಾಡಿದ್ದರು. ಕಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಬಾರ್ ಒಂದಕ್ಕೆ ಹೋಗಿದ್ದ.

ಅಟ್ಟಾಡಿಸಿದ ಕೊಂದ ಸ್ನೇಹಿತರು

ಈ ವೇಳೆ ಯಾವುದೋ ಕಾರಣಕ್ಕೆ ಸ್ನೇಹಿತರ ನಡುವೆ ಕಿರಿಕ್ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದ್ದು, ಡೇವಿಡ್ ಎದೆಯ ಭಾಗಕ್ಕೆ ಹರಿತವಾದ ಚಾಕುವಿನಿಂದ ಸ್ನೇಹಿತರು ಇರಿದಿದ್ದಾರೆ. ಸ್ನೇಹಿತರಿಂದ ತಪ್ಪಿಸಿಕೊಂಡು ಕಸವನಹಳ್ಳಿ‌ ಮುಖ್ಯರಸ್ತೆಯಲ್ಲಿ ಓಡಿ ಬಂದಿದ್ದಾನೆ. ಆದರೂ ಬೆನ್ನು ಬಿಡದ ಸ್ನೇಹಿತರು ಡೇವಿಡ್‌ಗೆ ಮನಬಂದಂತೆ ಥಳಿಸಿ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.

ಖಾಲಿ ಸೈಟ್‌ನಲ್ಲಿ ತೀವ್ರ ಅಸ್ವಸ್ಥನಾಗಿದ್ದ ಡೇವಿಡ್ ಬದುಕಲೇ ಬೇಕೆಂಬ ಹಠದಿಂದ ಹಳ್ಳದಿಂದ ಎದ್ದು ರೋಡಿಗೆ ಬಂದಿದ್ದಾನೆ. ಆದರೆ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಡೇವಿಡ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ದಾರಿಯಲ್ಲಿ ಬಂದ ಸ್ಥಳೀಯ ಯುವಕನೊಬ್ಬ ಡೇವಿಡ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder Case: ಶೀಲ ಶಂಕೆ; ಮಕ್ಕಳಿಬ್ಬರ ಕತ್ತು ಸೀಳಿ, ಪತ್ನಿಗೆ ಸುತ್ತಿಗೆಯಿಂದ ಹೊಡೆದವನ ಬಂಧಿಸಿದ ಖಾಕಿಪಡೆ

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳ್ಳಂದೂರು ಪೊಲೀಸರು ಡೇವಿಡ್ ಇನ್ನು ಜೀವಂತವಾಗಿದ್ದಾನೆಂದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಡೇವಿಡ್ ಕೊನೆಯುಸಿರೆಳೆದಿದ್ದ. ಘಟನಾ ಸ್ಥಳಕ್ಕೆ ಡಿಸಿಪಿ ಗಿರೀಶ್ ಹಾಗೂ ಎಫ್ಎಸ್ಎಲ್ ತಜ್ಞರ ತಂಡ ಹಂತಕರ ಬಗ್ಗೆ ಸಾಕ್ಷಿ ಕಲೆ ಹಾಕುತ್ತಿದ್ದಾರೆ. ಸದ್ಯ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು, ತಲೆಮರೆಸಿಕೊಂಡಿರುವ ಹಂತಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version