Site icon Vistara News

Murder Case: ಸ್ನೇಹಿತನ ಕೊಲೆಗೆ ಟ್ರಿಪ್‌ ನೆಪ; ಬಲಗೈ‌ ಬಂಟನಿಂದಲೇ ರೌಡಿಶೀಟರ್ ಹತ್ಯೆ

Rowdysheeter murder by his own friend

Rowdysheeter murder by his own friend

ಹಾಸನ/ಚಿಕ್ಕಮಗಳೂರು: “ಸ್ನೇಹ ಅಂತ ಒಳಗೊಳಗೆ ಸ್ಕೀಮು ಹಾಕ್ತಾರೋ, ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಡ್ತಾರೋ” ಎಂಬ ಜೋಗಿ ಸಿನಿಮಾದ ಈ ಫೇಮಸ್‌ ಹಾಡು (Murder Case) ಈ ಸುದ್ದಿಗೆ ಪಕ್ಕಾ ಸೂಟ್‌ ಆಗುತ್ತದೆ. ಯಾಕೆಂದರೆ ರೌಡಿಶೀಟರ್‌ವೊಬ್ಬನನ್ನು ಆತನ ಬಲಗೈ ಬಂಟನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಂತೋಷ್ ಅಲಿಯಾಸ್ ಪುಲ್ಲಿ (36) ಕೊಲೆಯಾದ ರೌಡಿಶೀಟರ್ ಆಗಿದ್ದಾನೆ.

ಹಾಸನ ನಗರದ ದಾಸರಕೊಪ್ಪಲು ಗ್ರಾಮದ ಸಂತೋಷ್‌ನನ್ನು ಆತನ ಸ್ನೇಹಿತರಾದ ರಂಗೋಲಿ ಹಳ್ಳದ ಪ್ರೀತಂ ಮತ್ತು ಹೇಮಾವತಿ ನಗರದ ಕೀರ್ತಿ ಎಂಬುವವರು ಹತ್ಯೆ ಮಾಡಿದ್ದಾರೆ. ಟ್ರಿಪ್‌ಗೆ ಎಂದು ಚಿಕ್ಕಮಗಳೂರಿಗೆ ಕರೆದುಕೊಂಡು ಹೋದ ಈ ಆರೋಪಿಗಳು, ಸಂತೋಷ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಕುರುವಂಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಪರಾರಿ ಆಗಿದ್ದರು.

ಆರೋಪಿಗಳಾದ ಪ್ರೀತಂ, ಕೀರ್ತಿ ಹಾಗೂ ಮೃತ ರೌಡಿಶೀಟರ್‌ ಸಂತೋಷ್‌

ಕಳೆದ ಫೆ.9 ರಂದು ಸಂತೋಷ್‌ ಕುಟುಂಬಸ್ಥರು ಬಡಾವಣೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆ ದಿನ ರಾತ್ರಿ ಸ್ಕೆಚ್‌ ಹಾಕಿದ ಆರೋಪಿಗಳು ಸಂತೋಷ್‌ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Suicide Case : ಪತಿ ಆತ್ಮಹತ್ಯೆ ಬೆನ್ನಲ್ಲೇ ಪತ್ನಿಯೂ ನೇಣಿಗೆ ಶರಣು, ಗಂಡನ ಸಾವಿಗೆ ಕಾರಣ ಎಂಬ ಆರೋಪಕ್ಕೆ ನೊಂದ ಮಹಿಳೆ

ಕೊಲೆಯಾದ ಪುಲ್ಲಿ ಹಾಗೂ ಕೊಲೆ ಮಾಡಿದ ಪ್ರೀತಂ ಇಬ್ಬರೂ ರೌಡಿಶೀಟರ್‌ಗಳಾಗಿದ್ದು, ಮೃತ ರೌಡಿಶೀಟರ್‌ 307, 302 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ. ಸಂತೋಷ್ ಶವವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಪೊಲೀಸರು, ಚಿಕ್ಕಮಗಳೂರು ಅರಣ್ಯದಲ್ಲೇ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version