Site icon Vistara News

Murder case : ದೊಣ್ಣೆಯಿಂದ ಹೊಡೆದು ಹೆತ್ತವಳನ್ನೇ ಕೊಂದ ಕುಡುಕ

Crime image

ಕೊಡಗು: ಇಲ್ಲಿನ ಬೇಸೂರು ಸಮೀಪದ ಕಟ್ಟೆಪುರ ಹಾಡಿಯಲ್ಲಿ ಮಗನೊಬ್ಬ ತಾಯಿಯನ್ನೆ ಹತ್ಯೆ (Murder case) ಮಾಡಿದ್ದಾನೆ. ಕಟ್ಟೆಪುರ ಹಾಡಿ ನಿವಾಸಿ ಲಲಿತಾ (45) ಮೃತ ದುರ್ದೈವಿ. ಜೇನುಕುರುಬರ ರಾಜಶೇಖರ್ ಹತ್ಯೆಕೋರ.

ಬುಧವಾರ ರಾತ್ರಿ (ಜು.12) ಕಂಠಪೂರ್ತಿ ಕುಡಿದು ಬಂದ ರಾಜಶೇಖರ್‌, ತಾಯಿಯೊಂದಿಗೆ ಗಲಾಟೆ ಶುರು ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಸಿಟ್ಟಿಗೆದ್ದ ರಾಜಶೇಖರ್‌ ಮನೆಯಲ್ಲಿದ್ದ ದೊಣ್ಣೆಯಿಂದ ತಾಯಿ ಲಲಿತಾ ಮೇಲೆ ಹಲ್ಲೆ ಮಾಡಿದ್ದಾನೆ. ಈತನಿಂದ ತಪ್ಪಿಸಿಕೊಳ್ಳಲು ಹೋದರೂ ಬಿಡದೆ ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ವಿಚಾರ ತಿಳಿದು ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶನಿವಾರಸಂತೆ ಪೊಲೀಸರು ಆರೋಪಿ ರಾಜಶೇಖರ್‌ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಗೃಹಿಣಿಯ ಕೊಲೆ ಮಾಡಿ ಆಕೆಯ ಮಗುವನ್ನು ಅಪಹರಿಸಿದ ಪ್ರಿಯಕರ

ದೇವನಹಳ್ಳಿ: ಗೃಹಿಣಿಯೊಬ್ಬರ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಪ್ರಿಯಕರನಿಂದಲೇ ಗೃಹಿಣಿ ಕೊಲೆಯಾಗಿರುವ (Murder Case) ಶಂಕೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಭಾರತಿ (27) ಮೃತಪಟ್ಟಿರುವ ದುರ್ದೈವಿ. ತಮ್ಮ ಬಾಡಿಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಗೃಹಿಣಿ ಮೃತ ದೇಹ ಪತ್ತೆಯಾಗಿದೆ.

ಈಕೆಯ ಸುಮಾರು 5 ವರ್ಷದ ಹೆಣ್ಣು ಮಗು ಸ್ಥಳದಿಂದ ಕಾಣೆ(child kidnap)ಯಾಗಿದೆ. ಮೃತ ಭಾರತಿಯ ಪ್ರಿಯಕರ ಹರೀಶ್ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈತನೇ ಮಗುವನ್ನೂ ಅಪರಹಣ ಮಾಡಿದ್ದಾನೆ ಎಂದು ತರ್ಕಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಒಂದೇ ಠಾಣೆಯಲ್ಲಿ 137 ನಾಪತ್ತೆ ಪ್ರಕರಣ

ಪದೇ ಪದೆ ದಾಖಲಾಗುತ್ತಿರುವ ಮಿಸ್ಸಿಂಗ್ ಕೇಸ್‌ಗಳು (Missing Case) ಬೆಂಗಳೂರು ಪೊಲೀಸರ (Bangalore police) ನಿದ್ದೆಗೆಡಿಸಿವೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಂದೇ ಸ್ಟೇಷನ್‌ನಲ್ಲಿ 137ಕ್ಕೂ ಹೆಚ್ಚು ನಾಪತ್ತೆ ಪ್ರಕರಣಗಳು ದಾಖಲಾಗಿವೆ.

ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಹೀಗೆ ಸಾಲು ಸಾಲು ಮಿಸ್ಸಿಂಗ್ ಕೇಸ್‌ಗಳು ದಾಖಲಾಗಿದ್ದು, ಎರಡೂವರೆ ವರ್ಷಗಳಲ್ಲಿ 137ಕ್ಕೂ ಹೆಚ್ಚು ನಾಪತ್ತೆ ಕೇಸ್‌ಗಳು ಬಂದಿವೆ. ಬಹುತೇಕ ವಾರಕ್ಕೊಂದರಂತೆ ಇವು ದಾಖಲಾಗುತ್ತಿವೆ. ಅದರಲ್ಲೂ ನಿಮ್ಹಾನ್ಸ್‌ನಿಂದಲೇ ಹೆಚ್ಚು ನಾಪತ್ತೆ ಕೇಸ್‌ಗಳು ದಾಖಲಾಗಿವೆ.

ಇದನ್ನೂ ಓದಿ: Shakti Scheme : ಬಸ್‌ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್‌ ಪೀಸ್!

ಮಾನಸಿಕ ಸಮಸ್ಯೆಗೆ ಚಿಕಿತ್ಸೆಗಾಗಿ ಎಂದು ಬರುವ ರೋಗಿಗಳು ಕ್ಷಣಮಾತ್ರದಲ್ಲೇ ನಾಪತ್ತೆಯಾಗುವುದು ಕಂಡುಬಂದಿದೆ. ನಿಮ್ಹಾನ್ಸ್ ಆವರಣ ಹಾಗೂ ಎನ್‌ಜಿಓಗಳ ಆವರಣಗಳಿಂದ ಇವರು ಕಣ್ಮರೆಯಾಗುತ್ತಿದ್ದಾರೆ. ನಾಪತ್ತೆಯಾದವರಲ್ಲಿ 70%ರಷ್ಟು ಯುವಕರೇ ಆಗಿದ್ದಾರೆ. ಸಿದ್ದಾಪುರ ಪೊಲೀಸರಿಗೆ ಈಗ ಕೊಲೆ, ಕೊಲೆ ಯತ್ನ ಕೇಸ್‌ಗಳಿಗಿಂತಲೂ ಈ ಮಿಸ್ಸಿಂಗ್ ಕೇಸ್‌ಗಳೇ ಹೆಚ್ಚು ತಲೆ ನೋವು ತಂದಿವೆ.

ಈ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ. ಇವು ಮಾಮೂಲಿ ನಾಪತ್ತೆ ಕೇಸ್‌ಗಳಾ ಅಥವಾ ಇದರ ಹಿಂದೆ ಏನಾದರೂ ಮಿಸ್ಟರಿ ಇದೆಯಾ ಎಂದು ಯೋಚಿಸಲು ಆರಂಭಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಈವರೆಗೆ 107 ಕೇಸ್‌ಗಳು ಟ್ರೇಸ್ ಆಗಿವೆ; ಇನ್ನೂ 30 ಜನರ ಬಗ್ಗೆ ಈವರೆಗೆ ಒಂದೂ ಸುಳಿವಿಲ್ಲ. ಅವರು ಬದುಕಿದ್ದಾರಾ, ಸತ್ತಿದ್ದಾರಾ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ಇವರು ಕಿಡ್‌ನ್ಯಾಪ್ ಆಗಿದ್ದಾರಾ, ಕೊಲೆ ಮಾಡಿದ್ದಾರಾ ಎಂಬ ಬಗ್ಗೆಯೂ ಅನುಮಾನಗಳಿವೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version