Site icon Vistara News

Murder Case | ಮಾವನ ಸಂಸಾರ ಸರಿಪಡಿಸಲು ಮಾತುಕತೆಗೆ ಕರೆದ ಅಳಿಯ; ಎಣ್ಣೆ ಗಲಾಟೆಯು ಕೊಲೆಯಲ್ಲಿ ಅಂತ್ಯ

Crime- Bag with body

ಬೆಂಗಳೂರು: ಇಲ್ಲಿನ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಹಿಮಾಲಯ ಡಾಬ ರಸ್ತೆಯಲ್ಲಿ ಎಣ್ಣೆ ಮತ್ತಲ್ಲಿ ಸಂಬಂಧಿಗಳ ನಡುವೆ ನಡೆದ ಗಲಾಟೆಯು ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಕೇಶವಮೂರ್ತಿ ಮೃತ ವ್ಯಕ್ತಿ.

ಮೃತ ಕೇಶವಮೂರ್ತಿ

ಭರತ್‌ ಎಂಬಾತ ತನ್ನ ಸೋದರ ಮಾವ ಕೇಶವಮೂರ್ತಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೇಶವಮೂರ್ತಿ ಹಲವು ದಿನಗಳಿಂದ ಮನೆಗೆ ತೆರಳದೇ ಪತ್ನಿಯನ್ನು ಬಿಟ್ಟಿದ್ದನಂತೆ. ಈ ಬಗ್ಗೆ ಮಾತನಾಡೋಣ ಬಾ ಎಂದು ಅಳಿಯ ಭರತ್‌ ಶನಿವಾರ ರಾತ್ರಿ ಕರೆದಿದ್ದಾನೆ. ಮಾತುಕತೆಗಾಗಿ ಕೇಶವಮೂರ್ತಿ ತನ್ನ ಗೆಳೆಯ ಕಲ್ಲೇಶ್ ಜತೆ ತೆರಳಿದ್ದರು.

ಮಾತುಕತೆಗೆ ಮುನ್ನ ಮೂವರೂ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ಮಾತು ಶುರು ಮಾಡಿದ್ದಾರೆ. ಸಂಸಾರದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಆಗ ಭರತ್‌ಗೆ ಕೋಪ ಬಂದಿದ್ದು, ಕಲ್ಲೇಶ್ ಹಾಗೂ ಕೇಶವ ಮೂರ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತದಿಂದಾಗಿ ಕೇಶವಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಲ್ಲೇಶ್ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ | Suicide Case : ಬಾಲಕಿ ಆತ್ಮಹತ್ಯೆ ಪ್ರಕರಣ; ಬಜರಂಗದಳದಿಂದ ಆರೋಪಿ ನಿತೇಶ್‌ಗೆ ಗೇಟ್‌ಪಾಸ್‌

Exit mobile version