Site icon Vistara News

Murder Case: ಇಟ್ಕೊಂಡವನಿಗಾಗಿ ಕಟ್ಕೊಂಡ ಗಂಡನಿಗೆ ಚಟ್ಟ ಕಟ್ಟಿದಳು; ಪ್ರಾಣ ಸ್ನೇಹಿತರೇ ಉಸಿರು ನಿಲ್ಲಿಸಿದ್ರು!

Murder Case in belgavi

ಬೆಳಗಾವಿ: ಇಲ್ಲಿನ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡಿಯಾಗಿದ್ದ (Illicit relationship) ಪತಿಯನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಹತ್ಯೆ (Murder case) ಮಾಡಿದ್ದಾಳೆ. ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ಸಂಧ್ಯಾ ಹಾಗೂ ಬಾಳು ಬಿರಂಜೆ ಬಂಧಿತ ಆರೋಪಿಗಳು.

ರಮೇಶ್ ಕಾಂಬಳೆ ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ಕಳೆದ ಮಾರ್ಚ್‌ 28ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ರಮೇಶ್‌ ನಾಪತ್ತೆಯಾಗಿದ್ದರು. ವಾರಗಳೇ ಕಳೆದರೂ ರಮೇಶ್‌ನ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ಏಪ್ರಿಲ್ 5ರಂದು ಪತಿ ನಾಪತ್ತೆ ಆಗಿದ್ದಾರೆಂದು ಪತ್ನಿ ಸಂಧ್ಯಾ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ನೀಡಿದ್ದಳು. ಬಳಿಕ ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಕಥೆ ಕೂಡ ಕಟ್ಟಿದ್ದಳು.

ಆರೋಪಿ ಸಂಧ್ಯಾ ಹಾಗೂ ಕೊಲೆಯಾದ ರಮೇಶ್‌

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ

ಈ ನಡುವೆ ಫೋನ್ ಮನೆಯಲ್ಲೇ ಇದ್ದರೂ ಯಾವುದೇ ಸ್ನೇಹಿತರ ಕರೆ ಬರದಿದ್ದಾಗ ರಮೇಶ್‌ನ ಪೋಷಕರಿಗೆ ಅನುಮಾನ ಬಂದಿದೆ. ಹೀಗಾಗಿ ರಮೇಶ ಸ್ನೇಹಿತರ‌ ಮೇಲೆ ಸಂದೇಹದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಪಿಎಂಪಿ ಠಾಣೆ ಪೊಲೀಸರು ಸಂಧ್ಯಾ ಹಾಗೂ ರಮೇಶ್‌ನ ಸ್ನೇಹಿತರನ್ನು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು ಮುಂದಾದರು. ಆದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾವೇ ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಸಂಧ್ಯಾ ಹಾಗೂ ಬಾಳು ಬಿರಂಜೆ ನಡುವೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದರು. ಸ್ನೇಹಿತ ನಮ್ಮಿಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಸಂಧ್ಯಾ ಹಾಗೂ ಬಾಳು ಬಿರಂಜೆ ಚಿಂತಿಸಿದ್ದರು. ಹೀಗಾಗಿ ಸಂಧ್ಯಾ ಹಾಗೂ ಬಾಳು ಬಿರಂಜೆ ಆತನ ಸ್ನೇಹಿತರು ಸೇರಿ ನಾಲ್ವರು ರಮೇಶ್‌ನನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಮಾಲೀಕನಿಂದ ಲಕ್ಷಾಂತರ ರೂ. ವಂಚನೆ; ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಗೋವಾದಲ್ಲಿ ಶವ ಬಿಸಾಡಿರುವ ಹಂತಕರು

ರಮೇಶ್‌ ಹತ್ಯೆಗೆ ಬಾಳು ಸ್ನೇಹಿತರೂ ಕೂಡ ಸಹಕರಿಸಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಮಾಡಿ ಗೋವಾದ ಚೋರ್ಲಾ ಘಾಟ್‌ನಲ್ಲಿ ಮೃತದೇಹವನ್ನು ಬಿಸಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ರಮೇಶ್ ಮೃತದೇಹ ಪತ್ತೆಗಾಗಿ ಎಪಿಎಂಸಿ ಠಾಣೆ ಪೊಲೀಸರು ಮುಂದಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version