Site icon Vistara News

ಚಿಕ್ಕಮಗಳೂರಲ್ಲಿ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾರಾಮಾರಿ ಜಗಳ; ಕಾರ್ಯಕ್ರಮದ ಬಳಿಕ ಕೊಲೆ

Varun And Kabab Murthy

#image_title

ಚಿಕ್ಕಮಗಳೂರು: ಇಲ್ಲಿನ ತರೀಕೆರೆ ಪಟ್ಟಣದಲ್ಲಿ ನೂತನ ಶಾಸಕರಿಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಒಂದು ಕೊಲೆಗೆ (Chikkamagaluru Murder) ಕಾರಣವಾಗಿದೆ. ಈ ಸಮಾರಂಭ ಮುಗಿಯುತ್ತಿದ್ದಂತೆ ಹೆಣ ಬಿದ್ದಿದೆ. ಇನ್ನಿಬ್ಬರಿಗೆ ಗಾಯವಾಗಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್​ಪಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ತರೀಕೆರೆ ನೂತ ಶಾಸಕ ಶ್ರೀನಿವಾಸ್ ಅವರಿಗಾಗಿ​​ ಅಭಿನಂದನಾ ಸಮಾರಂಭಕ್ಕೆ ಅದ್ಧೂರಿ ಸಿದ್ಧತೆ ಮಾಡಲಾಗಿತ್ತು. ಆರ್ಕೆಸ್ಟ್ರಾ ಕೂಡ ಇತ್ತು. ಸಮಾರಂಭದ ಮಧ್ಯೆ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರಕ್ಕೆ ವರುಣ್ ಮತ್ತು ಕಬಾಬ್ ಮೂರ್ತಿ ಎಂಬಿಬ್ಬರ ಮಧ್ಯೆ ಗಲಾಟೆಯಾಗಿತ್ತು. ಮಾತಿಗೆ ಮಾತು ಬೆಳೆದು ಅಲ್ಲಿ ಎರಡು ಗುಂಪುಗಳು ಸೃಷ್ಟಿಯಾಗಿದ್ದವು. ಕಾರ್ಯಕ್ರಮ ಮುಗಿದ ಬಳಿಕ ಗಲಾಟೆ ಹೆಚ್ಚಾಗಿ, 28 ವರ್ಷದ ವರುಣ್​ ಕೊಲೆಯಲ್ಲಿ ಅಂತ್ಯವಾಗಿದೆ. ಕಬಾಬ್ ಮೂರ್ತಿ ಸಿಟ್ಟಿನಿಂದ ವರುಣ್​ ಹೊಟ್ಟೆಗೆ ಡ್ರ್ಯಾಗರ್​​ ಹಾಕಿದ್ದಾನೆ. ಮಂಜು ಮತ್ತು ಸಂಜು ಎಂಬುವರ ಕೈ ಹಾಗೂ ಕಾಲಿಗೂ ಚಾಕುವಿನಿಂದ ಇರಿಯಲಾಗಿದೆ. ಇವರಲ್ಲಿ ವರುಣ್ ತೀವ್ರ ಗಾಯಗೊಂಡಿದ್ದ. ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಲವ್ವರ್​​ಗೆ ಮೆಸೇಜ್​ ಮಾಡುತ್ತಿದ್ದ ಸ್ನೇಹಿತನಿಗೆ ಚಾಕು ಇರಿತ: ಹಣ ಕೊಡಲು ಒಪ್ಪದ ತಮ್ಮನ ಹತ್ಯೆ

Exit mobile version