Site icon Vistara News

Murder revenge : ಹೊನ್ನಾಳಿ ಬಳಿ ಗ್ಯಾಂಗ್‌ವಾರ್‌, ಕೊಲೆ ಆರೋಪದಲ್ಲಿ ಜಾಮೀನು ಪಡೆದು ಹೊರಬಂದವನ ಕೊಲೆ

Murder at honnali

#image_title

ದಾವಣಗೆರೆ: ಹೊನ್ನಾಳಿ ತಾಲೂಕಿನ ಚೀಲೂರು ಬಳಿ ಬುಧವಾರ ರೌಡಿಗಳ ಗ್ಯಾಂಗ್‌ವಾರ್‌ನಲ್ಲಿ ಒಬ್ಬನನ್ನು ಕೊಲೆ ಮಾಡಲಾಗಿದೆ. ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಇದು ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಪ್ರತೀಕಾರವಾಗಿ (Murder revenge) ನಡೆದ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಜನೇಯ ಮತ್ತು ಮಧು ಎಂಬವರು ಕೋರ್ಟ್‌ಗೆ ಹಾಜರಾಗಿ ಮರಳಿ ಬರುತ್ತಿದ್ದಾಗ ಸ್ಕಾರ್ಪಿಯೋ ವಾಹನ ಡಿಕ್ಕಿ ಹೊಡೆಸಲಾಗಿದೆ. ಬಳಿಕ ಆಂಜನೇಯನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಆಂಜನೇಯ ಹಂದಿ ಅಣ್ಣಿ ಎಮಬಾತನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದು, ಅದಕ್ಕೆ ಪ್ರತಿಯಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಏನಿದು ಪ್ರಕರಣ, ಹಿನ್ನೆಲೆ ಏನು?

ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್‌ ಹಂದಿ ಅಣ್ಣಿ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಹಂದಿ ಅಣ್ಣಿ ಕೊಲೆ ಕೇಸ್‌ನಲ್ಲಿ ಮಧು ಮತ್ತು ಅಂಜನೇಯ ಅಲಿಯಾಸ್ ಅಂಜಿನಿಯನ್ನು ಬಂಧಿಸಲಾಗಿತ್ತು. ಮಧು ಮತ್ತು ಆಂಜನೇಯ ಇತ್ತೀಚೆಗೆ ಜಾಮೀನು ಪಡೆದು ಹೊರಗೆ ಬಂದಿದ್ದರು. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮಕ್ಕೆ ಸೇರಿದ ಮಧು, ಆಂಜನೇಯ ಅವರಿಗೆ ಬುಧವಾರ ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಬೇಕಾಗಿತ್ತು.

ಹೀಗೆ ಕೋರ್ಟ್‌ಗೆ ಹಾಜರಾಗಿ ಅವರಿಬ್ಬರು ಶಿವಮೊಗ್ಗದಿಂದ ಬೈಕ್‌ ಮೂಲಕ ಚೀಲೂರು ಕಡೆಗೆ ಬರುತ್ತಿದ್ದರು. ಈ ನಡುವೆ ಹಂದಿ ಅಣ್ಣಿ ಗ್ಯಾಂಗ್‌ ಶಿವಮೊಗ್ಗದಿಂದ ಸ್ಕಾರ್ಪಿಯೋ ಕಾರಿನಲ್ಲಿ ಫಾಲೋ ಮಾಡುತ್ತಿತ್ತು.

ಬೈಕ್‌ ಚೀಲೂರು ಬಳಿಯ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕಾರಿನಿಂದ ಡಿಕ್ಕಿ ಹೊಡೆಸಲಾಯಿತು. ಮಧು, ಆಂಜನೇಯ ಬೈಕ್‌ನಿಂದ ಕೆಳಗೆ ಬಿದ್ದ ತಕ್ಷಣ ಗ್ಯಾಂಗ್‌ ಮನಸೋ ಇಚ್ಛೆ ಹಲ್ಲೆ ಮಾಡಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವನ ಜತೆಗಿದ್ದ ಮಧುಗೆ ಗಂಭೀರ ಗಾಯವಾಗಿದೆ.

ಮಧುವಿಗೆ ಈಗ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ; Dalit woman murder: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ದಲಿತ ಯುವತಿ ಸಾವು, ಕೊಲೆ ಶಂಕೆ

Exit mobile version