Site icon Vistara News

ಮುರುಘಾಶ್ರೀ ಪ್ರಕರಣ | ಶ್ರೀಗಳ ಶಿಫ್ಟ್‌ ಬಗ್ಗೆ ಜಯದೇವಕ್ಕೆ ಮಾಹಿತಿ ಇಲ್ಲ, ಹಾಗಾದರೆ ಎಲ್ಲಿಗೆ?

murugha sree chest pain

ಚಿತ್ರದುರ್ಗ: ಎದೆನೋವಿನಿಂದ ಬಳಲುತ್ತಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬೆಂಗಳೂರಿನ ಜಯದೇವ ಹಾಸ್ಪಿಟಲ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಸರ್ಜನ್ ನೀಡಿರುವ ಮಾಹಿತಿ ಮಾಧ್ಯಮಗಳ ದಾರಿ ತಪ್ಪಿಸಲು ನೀಡಿದ ಹೇಳಿಕೆಯೇ ಎಂಬ ಶಂಕೆ ಮೂಡಿದೆ.

ಯಾಕೆಂದರೆ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.‌ ಮಂಜುನಾಥ್ ತಿಳಿಸಿದ್ದಾರೆ. ಜಯದೇವ ಆಸ್ಪತ್ರೆಗೆ ಶ್ರೀಗಳು ಶಿಫ್ಟ್ ಆಗುವ ಬಗ್ಗೆ ಇದುವರೆಗೂ ನಮಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕೊಟ್ಟಿಲ್ಲ. ಆದರೆ ಜಯದೇವ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಎಂದು ಸುದ್ದಿ ಹರದಾಡುತ್ತಿದೆ. ಒಂದು ವೇಳೆ ಜಯದೇವಕ್ಕೆ ಶಿಫ್ಟ್ ಆದರೆ ಬೆಡ್ ವ್ಯವಸ್ಥೆ ಮಾಡುತ್ತೇವೆ ಎಂದು ನಿರ್ದೇಶಕರು ಹೇಳಿದ್ದಾರೆ.

ಹೀಗಾಗಿ, ಮಾಧ್ಯಮಗಳು ಹಾಗೂ ಜನತೆಯ ದಾರಿ ತಪ್ಪಿಸಲು ಚಿತ್ರದುರ್ಗ ಜಿಲ್ಲಾ ಸರ್ಜನ್ ಶ್ರೀಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡುವುದಾಗಿ ಹೇಳಿದರೇ ಎಂಬ ಶಂಕೆ ಮೂಡಿದೆ. ಹಾಗಾದರೆ ಶ್ರೀಗಳನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ, ಅಥವಾ ಜಿಲ್ಲಾಸ್ಪತ್ರೆಯಲ್ಲಿಯೇ ಐಸಿಯುವಿನಲ್ಲಿ ಮುಂದುವರಿಸಲಾಗುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ| ಶ್ರೀಗಳ ಅರೆಸ್ಟ್‌ ಬೆನ್ನಿಗೇ 2ನೇ ಆರೋಪಿ ವಾರ್ಡನ್‌ ರಶ್ಮಿ ಕೂಡಾ ಬಂಧನ

Exit mobile version