Site icon Vistara News

MyBharat | ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಪಾತ್ರ; ಆಗಸ್ಟ್‌ 2ರಂದು ವಿಚಾರ ಸಂಕಿರಣ

disha bharath FB Live

ಬೆಂಗಳೂರು: ದಿಶಾ ಭಾರತ್ ಫೌಂಡೇಶನ್‌ನಿಂದ ನನ್ನ ಭಾರತ (MyBharat) ಅಭಿಯಾನ ಭಾಗವಾಗಿ ಆಗಸ್ಟ್‌ 2ರಂದು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳ ಪಾತ್ರ” ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಸಾಹಿತಿ, ಚಿಂತಕ ಬಾಬು ಕೃಷ್ಣಮೂರ್ತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಈ ಬಗ್ಗೆ ಮಾತನಾಡಲಿದ್ದಾರೆ. ಮಂಗಳವಾರ ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಸಾರವಾಗಲಿದೆ. www.facebook.com/Dishabharat ಮೂಲಕ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದು.

75ನೇ ಸ್ವಾತಂತ್ರೋತ್ಸವ ವರ್ಷಾಚರಣೆಯ ಪ್ರಯುಕ್ತ ದೇಶ ಭಕ್ತಿ ಮೂಡಿಸುವ ಯುವ ಅಭಿಯಾನವನ್ನು ದಿಶಾ ಭಾರತ್ ಫೌಂಡೇಶನ್ ಆರಂಭ ಮಾಡಿದೆ. ಈ ಸಂಬಂಧ ಹಲವಾರು ಕಾರ್ಯಕ್ರಮಗಳನ್ನು ಯುವ ಜನತೆಗಾಗಿ ಹಮ್ಮಿಕೊಳ್ಳಲಾಗಿದೆ.

Exit mobile version