Site icon Vistara News

ಮೈಸೂರಲ್ಲಿ ಜೈಲಿಂದ ಹೊರಬರುತ್ತಿದ್ದಂತೆ ಹತ್ಯೆಯಾದ ರೌಡಿಶೀಟರ್; ಸಿಸಿಟಿವಿಯಲ್ಲಿ ದೃಶ್ಯ ಸೆರೆ, 8ಮಂದಿ ಶರಣು

Mysore Rowdy sheeter murder Case CCTV Footage Video recovered by Police

#image_title

ಮೈಸೂರು: ಹಾಡಹಗಲಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದ ರೌಡಿಶೀಟರ್​ ಚಂದ್ರಶೇಖರ್​ ಅಲಿಯಾಸ್​ ಚಂದುವನ್ನು ಹಂತಕರು ಕೊಂದಿರುವ (Mysuru Murder Case) ದೃಶ್ಯಗಳುಳ್ಳ ಸಿಸಿಟಿವಿ ಫೂಟೇಜ್​ಗಳು ಲಭ್ಯವಾಗಿವೆ. ಹಂತಕರ ಗುರುತೂ ಪತ್ತೆಯಾಗಿದೆ. ಒಂಟಿಕೊಪ್ಪಲಿನ ನಿವಾಸಿಯಾಗಿದ್ದ ಚಂದು ಜೋಡಿಕೊಲೆ ಕೇಸ್​​ನಲ್ಲಿ ಜೈಲಿನಲ್ಲಿ ಇದ್ದವನು ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದ. ಹಾಗೇ ಬಂದವನೇ ತನ್ನ ವಿರೋಧಿ ಗುಂಪಿನ ಗ್ಯಾಂಗ್​ಸ್ಟರ್​​ಗಳಿಗೆ ಬಲಿಯಾಗಿದ್ದ.

ಇದೀಗ ಈ ಹತ್ಯೆ ನಡೆದ ಹೊತ್ತಿನ ಸಿಸಿಟಿವಿ ಫೂಟೇಜ್​ಗಳು ಲಭ್ಯವಾಗಿವೆ. ಚಂದುವನ್ನು ಕೊಲ್ಲಲು ಹಂತಕರು ನಾಲ್ಕು ದ್ವಿಚಕ್ರವಾಹನಗಳಲ್ಲಿ, ತಲಾ ಮೂರು ಜನ ಬಂದಿದ್ದರು. ಚಂದುವಿನತ್ತ ಮಚ್ಚು​ ಬೀಸಿದ್ದರು. 5 ಸೆಕೆಂಡ್​ಗಳಲ್ಲಿ ಆತನ ಪ್ರಾಣ ಹೋಗಿತ್ತು. ಹಗಲಲ್ಲೇ, ರಾಜಾರೋಷವಾಗಿ ಹತ್ಯೆ ಮಾಡಿ ವಾಪಸ್ ಹೋಗಿದ್ದಾರೆ. ಈ ಹತ್ಯೆ ಕೇಸ್​​ನಲ್ಲಿ ಒಟ್ಟು 8 ಮಂದಿ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: Murder Case: ಮೈಸೂರಲ್ಲಿ ರೌಡಿಶೀಟರ್‌ ಮರ್ಡರ್‌; ಮುಖ್ಯರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಇನ್ನು ಚಂದು, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಹದೇಶ ಅಲಿಯಾಸ್​ ಅವ್ವ ಮಾದೇಶ್​​ನ ಆಪ್ತನಾಗಿದ್ದ. ಹುಣಸೂರಲ್ಲಿ ನಡೆದ ಒಂದು ಜೋಡಿಕೊಲೆ ಮತ್ತು ಪಡುವಾರಳ್ಳಿಯ ದೇವು ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲನ್ನೂ ಸೇರಿದ್ದ. ಆದರೆ ಇತ್ತೀಚೆಗೆ ವಾಪಸ್ ಬಂದಿದ್ದ. ಈಗ ಪಡುವಾರಳ್ಳಿ ದೇವು ಹತ್ಯೆಗೆ ಗ್ಯಾಂಗ್​ಸ್ಟರ್​ಗಳು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಈ ಗ್ಯಾಂಗ್​​ನ ಹಲವರು ಜೈಲಲ್ಲಿಯೇ ಇದ್ದರು. ಆದರೆ ಅಲ್ಲೇ ಇದ್ದುಕೊಂಡು ಚಂದು ಕೊಲೆಗೆ ಸಂಚು ರೂಪಿಸಿದ್ದರು.

ಹತ್ಯೆಯಾದ ಚಂದು ಮತ್ತು ಹಂತಕರು
Exit mobile version