Site icon Vistara News

Siddheshwar Swamiji : ನಾಲತವಾಡ, ನಿಡಗುಂದಿ ಪಟ್ಟಣ ಬಂದ್‌; ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ

nalatawada bandh ಸಿದ್ದೇಶ್ವರ ಸ್ವಾಮೀಜಿ

ವಿಜಯಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಅವರ ದೇಹಾಂತ್ಯದ ಸುದ್ದಿಯನ್ನು ಅರಗಿಸಿಕೊಳ್ಳಲು ಜಿಲ್ಲೆಯ ಜನರಿಗೆ ಈಗಲೂ ಆಗುತ್ತಿಲ್ಲ. ಪ್ರತಿ ಮನೆಯಿಂದಲೂ ಆಶ್ರಮದತ್ತ ಜನರು ದೌಡಾಯಿಸುತ್ತಿದ್ದಾರೆ, ಕಣ್ಣೀರಾಗುತ್ತಿದ್ದಾರೆ. ಈ ನಡುವೆ ವಿವಿಧೆಡೆ ಬಂದ್‌ ಮಾಡಿ ಶೋಕ ವ್ಯಕ್ತಪಡಿಸಲಾಗಿದೆ.

ಈ ನಡುವೆ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣ ಹಾಗೂ ಬಸವನಬಾಗೇವಾಡಿ ತಾಲೂಕಿನ ನಿಡಗುಂದಿ ಪಟ್ಟಣದ ಮಾರುಕಟ್ಟೆಯನ್ನು ಬಂದ್‌ ಮಾಡಿ ಶೋಕಾಚರಣೆ ನಡೆಸಲಾಗಿದೆ.

ನಾಲತವಾಡ ಪಟ್ಟಣದ ಜನತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿ ತೆರಳಿದ್ದಾರೆ. ನಿಡಗುಂದಿ ಪಟ್ಟಣದ ಮಾರುಕಟ್ಟೆಯೂ ಸಹ ಸ್ತಬ್ಧವಾಗಿದ್ದು, ಅಲ್ಲಿಂದಲೇ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಇನ್ನು ತಾಂಬಾ ಗ್ರಾಮದ ಶ್ರೀ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಅಂತಿಮ ನಮ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ | Siddheshwar Swamiji : ಕಾಣಿಸುವ ದೇವರೇ, ನೀನೂ ನಮಗೆ ಕಾಣದಂತಾದೆಯಾ?; ಕಣ್ಣೀರಿಟ್ಟ ಭಕ್ತೆ

Exit mobile version