Site icon Vistara News

ಅಖಾಡಕ್ಕಿಳಿದು ಕಬಡ್ಡಿ ಮೈದಾನದಲ್ಲಿ ತೊಡೆ ತಟ್ಟಿದ ನಿಖಿಲ್ ಕುಮಾರಸ್ವಾಮಿ; ಶಿಳ್ಳೆ, ಚಪ್ಪಾಳೆಗಳ ಸುರಿಮಳೆ

ಮಂಡ್ಯ ಕಬ್ಬಡಿ

ಮಂಡ್ಯ: ಜಿಲ್ಲೆಯ ಹುಳ್ಳೇನಹಳ್ಳಿಯಲ್ಲಿ ಆಯೋಜಿಸಿದ್ದ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿ ಶುಭ ಕೋರಿದರು. ಈ ವೇಳೆ ಅವರೇ ಖುದ್ದು ಅಖಾಡಕ್ಕಿಳಿದು ಕ್ರೀಡಾಸ್ಫೂರ್ತಿ ಮೆರೆದರು.

ಪಂದ್ಯಾವಳಿ ಸಮರೋಪ ಸಮಾರಂಭ ಹಿನ್ನೆಲೆಯಲ್ಲಿ ಸೆಮಿಫೈನಲ್ ಪಂದ್ಯದ ವೇಳೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ, ಕಬಡ್ಡಿ ಮೈದಾನಕ್ಕಿಳಿದು ರೈಡರ್ ಆಗುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ನಿಖಿಲ್ ಕುಮಾರಸ್ವಾಮಿ ಮೈದಾನಕ್ಕಿಳಿಯುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಬಂತು. ನಿಖಿಲ್ ಜತೆ ಸೆಲ್ಫಿಗಾಗಿ ಯುವತಿಯರು, ಯುವಕರು ಮುಗಿಬಿದ್ದರು.

ಬಳಿಕ ಮಾತಾನಾಡಿದ ನಿಖಿಲ್‌, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆಟಗಾರರು ಸೋಲು- ಗೆಲುವು ಕುರಿತು ತಲೆಕೆಡಿಸಿಕೊಳ್ಳಬಾರದು. ಸೋತವರು ನಿರಾಸೆಯಾಗದೆ ಮರಳಿ ಯತ್ನಿಸುತ್ತಿರಬೇಕೆಂದು ಕಿವಿಮಾತು ಹೇಳಿದರು.

ಇದನ್ನೂ ಓದಿ | Saeed Anwar | ಹಾಶಿಮ್​ ಆಮ್ಲಾ ಹಿಂದೂ ಕುಟುಂಬಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರೆ; ವಿವಾದಾತ್ಮ ಹೇಳಿಕೆ ನೀಡಿದ ಸಯೀದ್​ ಅನ್ವರ್​!

Exit mobile version