Site icon Vistara News

Organ donation: ಸಾವಿನಲ್ಲೂ ಸಾರ್ಥಕತೆ, ಅಪಘಾತದಲ್ಲಿ ಮೃತ ಯುವಕನ ಅಂಗದಾನ

youth organ donation

ಹಾಸನ: ಅಪಘಾತದಲ್ಲಿ (Road accident) ಯುವಕನ ಸಾವಿನ ದುಃಖದ ನಡುವೆಯೂ ಮಾನವೀಯತೆ ಮೆರೆದ ಕುಟುಂಬ, ಅಂಗಾಂಗ ದಾನ (organ donation) ಮಾಡಿ ಸಾರ್ಥಕತೆ ಪಡೆದಿದೆ.

ಹಾಸನದ (hassan news) ವಿದ್ಯಾನಗರದಲ್ಲಿ ನಡೆದಿದ್ದ ಅಪಘಾತದಲ್ಲಿ ನಗರದ ಆಚಾರ್ಯ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷಿಲ್‌ ಎನ್(16) ಗಾಯಗೊಂಡು ಸಾವನ್ನಪ್ಪಿದ್ದರು. ಅಪಘಾತ ಸಂದರ್ಭ ಹರ್ಷಿಲ್ ತಲೆಗೆ ಪೆಟ್ಟಾಗಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿಲ್‌ ಸಾವಿಗೀಡಾಗಿದ್ದಾರೆ.

ಇನ್ನೊಂದು ದುರಂತವೆಂದರೆ, ಈ ಯುವಕ ಕೋವಿಡ್ ಸಂದರ್ಭ ತಂದೆ ತಾಯಿ‌ ಇಬ್ಬರನ್ನೂ ಕಳೆದುಕೊಂಡಿದ್ದ ಕೂಡ. ಈತ ತನ್ನ ಅಜ್ಜಿಯ ಮನೆಯಲ್ಲಿ ‌ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹರ್ಷಿಲ್ ಸಾವಿನಿಂದ ಮನನೊಂದಿರುವ ಕುಟುಂಬ, ಈ ದುಃಖದ ನಡುವೆಯೂ ಮಾನವೀಯತೆ ಮೆರೆದರು. ಅಂಗಾಂಗ ದಾನ ಮಾಡುವ ಮೂಲಕ ಸಾವಿಗೆ ಸಾರ್ಥಕತೆ ತಂದರು.

ಅಪಘಾತದಲ್ಲಿ ಸಾವು, ನೇತ್ರದಾನ

ಧಾರವಾಡ: ಸೋಮವಾರ ನಡೆದ ಬೈಕ್ ಡಿಕ್ಕಿ ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಧಾರವಾಡದ (dharwad news) ತೇಜಸ್ವಿ ನಗರದಲ್ಲಿ ಘಟನೆ ನಡೆದಿತ್ತು. ಚನ್ನಬಸಪ್ಪ ಹಲ್ಲಲ್ಲಿ (35) ಮೃತ ವ್ಯಕ್ತಿಯಾಗಿದ್ದು, ಸಂಜೆ ತನ್ನ ಮಕ್ಕಳ ಜೊತೆ ಬೈಕ್‌ನಲ್ಲಿ ತೆರಳುವಾಗ ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದು ಸಾವು ಸಂಭವಿಸಿತ್ತು.

ಇಬ್ಬರ ಮಕ್ಕಳ ಜೀವ ಉಳಿಸಿ ಚನ್ನಬಸಪ್ಪ ಬೈಕ್ ಮೇಲಿಂದ ಬಿದ್ದಿದ್ದರು. ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದರು. ಸದ್ಯ ಎರಡು ಮಕ್ಕಳಿಗೆ ಎಸ್‌ಡಿಎಂ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Road Accident: ಕ್ಯಾಂಟರ್‌ ತಲೆ ಮೇಲೆ ಹರಿದು ಬೈಕ್‌ ಸವಾರರ ಸಾವು

Exit mobile version