Site icon Vistara News

Karnataka Election: ಕಾಂಗ್ರೆಸ್ ಭವನದಲ್ಲಿ ಪೇಸಿಎಂ ಹೋಮ; ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಪಠಣ

PayCM homa at Congress Bhavan in bengaluru, Chanting mantras to remove corrupt government

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ ನಾಯಕರು, ಮುಖಂಡರು, ಇದೀಗ ಭ್ರಷ್ಟ ಸರ್ಕಾರ ತೊಲಗಬೇಕು ಎಂದು ʼಪೇಸಿಎಂ ಹೋಮʼ ಹೆಸರಿನಲ್ಲಿ ಹೋಮ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ (Karnataka Election) ಕಾಂಗ್ರೆಸ್‌ ಮುಖಂಡ ಮನೋಹರ್ ನೇತೃತ್ವದಲ್ಲಿ ಸೋಮವಾರ ಹೋಮ ಮಾಡಲಾಗಿದೆ.

ಭ್ರಷ್ಟಾಚಾರ ಸುಡಲು ವಿಶೇಷ ಹೋಮ ಮಾಡಿರುವುದಾಗಿ ಕೈ ಮುಖಂಡರು ಹೇಳಿದ್ದಾರೆ. ಬೆಲೆ ಏರಿಕೆ ಇಳಿಯಲಿ, ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಘೋಷ ಮಾಡಲಾಗಿದೆ. ಮೋದಿ ಸರ್ಕಾರ ತೊಲಗಲಿ, ಬೊಮ್ಮಾಯಿ ಸರ್ಕಾರ ತೊಲಗಲಿ, 40% ಸರ್ಕಾರ ತೊಲಗಲಿ ಎಂದು ಹೋಮಕ್ಕೆ ಹವಿಸ್ಸು ಅರ್ಪಣೆ ಮಾಡಿ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ | Karnataka Election 2023: ಹಣ, ಅಧಿಕಾರಕ್ಕಾಗಿ ಬಿಜೆಪಿಗೆ ಹೋದ ಭ್ರಷ್ಟ ಶಾಸಕನನ್ನು ಬದಲಿಸಿ: ಡಿ.ಕೆ. ಶಿವಕುಮಾರ್

ಹೋಮದ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ‌ ಮನೋಹರ್, ಇಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಬಿಜೆಪಿಯವರು ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಸ್ವಾಹ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ 40% ಕಮಿಷನ್ ಬಿಜೆಪಿ ಸರ್ಕಾರ ತೊಲಗಲಿ ಎಂದು ಹೋಮ ಮಾಡಿಸಲಾಗಿದೆ ತಿಳಿಸಿದರು.

ಸಂಬಂಧಿಕರಿಗೆ ಟೆಂಡರ್‌ ಕೊಡಿಸಿದ ಗೋಪಾಲಯ್ಯ ದುಡ್ಡಷ್ಟೇ ಮಾಡಿದ್ದು: ಕೇಶವ ಮೂರ್ತಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ (Karnataka Election 2023) ಕಾವು ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಸೋಮವಾರ (ಮೇ 8) ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ (Mahalakshmi Layout) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿ (Congress candidate Keshava Murthy) ಬಿರುಸಿನ ಪ್ರಚಾರ ಮಾಡಿದರು.

ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಅವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲಾಗುವುದು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜನರೇ ಈ ಬಾರಿ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಲಿದ್ದಾರೆ ಎಂದು ಕೇಶವ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೇಶವ ಮೂರ್ತಿ

ಗೋಪಾಲಯ್ಯ ವಿರುದ್ಧ ವಾಗ್ದಾಳಿ

ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಮಹತ್ವದ ಚಿಂತನೆ ಇಟ್ಟುಕೊಂಡಿದ್ದು, ಸರ್ವತೋಮುಖ ಅಭಿವೃದ್ಧಿ ಶ್ರಮಿಸುವುದಾಗಿ ಕೇಶವ ಮೂರ್ತಿ ಹೇಳಿದರು. ಇದೇ ವೇಳೆ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Elephant Balarama : ಗಜರಾಜ ಬಲರಾಮನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಗೋಪಾಲಯ್ಯ ಜನಸೇವೆಯಲ್ಲಿ ತೊಡಗಿದ್ದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದಲ್ಲೇ ತೊಡಗಿದ್ದಾರೆ. ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಂದರೂ ಯಾವುದೇ ಅಭಿವೃದ್ಧಿ ಆಗಿಲ್ಲ. ಕೇವಲ ತಮ್ಮ ಸಂಬಂಧಿಕರಿಗೆ ಕಾಮಗಾರಿಗಳ ಟೆಂಡರ್ ನೀಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರಷ್ಟೇ ಎಂದು ಕಿಡಿಕಾರಿದರು.

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಗಳನ್ನು ಕೂಡ ಗೋಪಾಲಯ್ಯ ಒತ್ತುವರಿ ಮಾಡಿಕೊಂಡಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದನ್ನೆಲ್ಲ ತನಿಖೆ ಮಾಡಿಸುವುದಾಗಿ ಮಹಾಲಕ್ಷ್ಮೀ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮೂರ್ತಿ ಹೇಳಿದ್ದಾರೆ.

Exit mobile version