Site icon Vistara News

CT Ravi | ಚಿಕ್ಕಮಗಳೂರಿನಲ್ಲಿ ಯುವಜನೋತ್ಸವಕ್ಕೆ ಹಾಕಿದ್ದ ಫ್ಲೆಕ್ಸ್‌ನಲ್ಲಿ ಸಿ.ಟಿ. ರವಿ ಅವರ ಭಾವಚಿತ್ರಕ್ಕೆ ಬ್ಲೇಡ್‌

CT Ravi flex CT Ravi challenges congress to complain about tender-scam

ಚಿಕ್ಕಮಗಳೂರು: ನಗರದ ಹನುಮಂತ ವೃತ್ತದಲ್ಲಿ ರಾಜ್ಯ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹಾಕಿದ್ದ ಫ್ಲೆಕ್ಸ್‌ನಲ್ಲಿರುವ ಕೆಲವು ಚಿತ್ರಗಳಿಗೆ ಕಿಡಿಗೇಡಿಗಳು ಬ್ಲೇಡ್‌ನಿಂದ ಗೀರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ಮತ್ತು ನಗರಸಭೆ ಅಧ್ಯಕ್ಷ ವೇಣುಗೋಪಾಲ್‌ ಸೇರಿದಂತೆ ಹಲವು ಮುಖಂಡತರ ಭಾವಚಿತ್ರಗಳಿಗೆ ಬ್ಲೇಡ್‌ ಹಾಕಲಾಗಿದೆ.

ಡಿಸೆಂಬರ್‌ ೧೭ರಿಂದ ಎರಡು ದಿನಗಳ ಕಾಲ ಇಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವ ನಡೆಯಲಿದ್ದು, ಅದಕ್ಕೆ ಪೂರಕವಾಗಿ ನಗರವನ್ನು ಅಲಂಕರಿಸಲಾಗಿದೆ. ಸಿ.ಟಿ. ರವಿ ಸೇರಿದಂತೆ ಪ್ರಮುಖ ನಾಯಕರ ಹೆಸರಿನಲ್ಲಿ ಫ್ಲೆಕ್ಸ್‌ ಹಾಕಲಾಗಿದೆ.

ಗುರುವಾರ ರಾತ್ರಿ ದುಷ್ಕರ್ಮಿಗಳು ಸಿ.ಟಿ. ರವಿ ಸೇರಿದಂತೆ ಪ್ರಮುಖ ನಾಯಕರ ಚಿತ್ರಗಳಿಗೆ ಬ್ಲೇಡ್‌ ಹಾಕಿದ್ದರಿಂದ ಪೊಲೀಸರು ತುರ್ತಾಗಿ ಧಾವಿಸಿದ್ದಾರೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಪುರುಷೋತ್ತಮ್, ನಗರದ ಠಾಣೆ ಪಿ.ಎಸ್.ಐ ದೌಡಾಯಿಸಿದ್ದಾರೆ. ಹರಿದ ಫ್ಲೆಕ್ಸ್ ಗಳನ್ನು ವಶಕ್ಕೆ ಪಡೆದು ಒಯ್ದಿದ್ದಾರೆ.

ಈ ಘಟನೆಯಿಂದ ಬಿಜೆಪಿ ಕಾರ್ಯಕರ್ತರು ಕೆರಳಿದ್ದು, ಈ ಕೃತ್ಯದಿಂದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Karnataka Election | ಕೆಲಸದಲ್ಲಿ ಗೆದ್ದು ನಡವಳಿಕೆಯಲ್ಲಿ ಸೋತವರಿಗೆ ಟಿಕೆಟ್‌ ಇಲ್ಲ ಎಂದ ಸಿ.ಟಿ. ರವಿ

Exit mobile version