Site icon Vistara News

Physical Abuse : ವೈನ್‌ ಕೊಟ್ಟು ರೇಪ್‌ ಮಾಡಿದ್ದ ನಿವೃತ್ತ ಐಎಎಸ್‌; ದೌರ್ಜನ್ಯದ ಹಿಂದಿನ ಕಹಾನಿ ಏನು?

Retired IAS officer raped woman

ಬೆಂಗಳೂರು: ಕೇರ್‌ ಟೇಕರ್‌ ಆಗಿ ಬಂದ ಯುವತಿಗೆ ಮತ್ತಿನೌಷಧಿ ನೀಡಿ ನಿವೃತ್ತ ಐಎಎಸ್ ಅಧಿಕಾರಿ ಅತ್ಯಾಚಾರ (Physical Abuse) ಎಸಗಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಜಯನಗರದಲ್ಲಿ ಈ ಘಟನೆ ನಡೆದಿದ್ದು, ನಿ‌ವೃತ್ತ ಐಎಎಸ್‌ ಅಧಿಕಾರಿ ರಾಮಚಂದ್ರ ಎಂಬುವವರ ವಿರುದ್ಧ ತಿಲಕ್‌ನಗರದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶಿವಮೊಗ್ಗದ ನಿವಾಸಿಯಾಗಿರುವ ಸಂತ್ರಸ್ತೆ (28) ಪ್ರೊಪ್ರೇಟರ್‌ ಕೆಲಸ ಮಾಡಿಕೊಂಡಿದ್ದರು. ಹೀಗಿದ್ದಾಗ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ರಾಮಚಂದ್ರ ಸಂತ್ರಸ್ತೆಗೆ ಫೋನ್‌ ಕರೆ ಮಾಡಿ, ಪತ್ನಿಗೆ ಮರೆವಿನ ಕಾಯಿಲೆ ಇದೆ. ಪತ್ನಿಯ ಸ್ಥಿತಿ ನೋಡಿಕೊಂಡು ಕೇರ್‌ ಟೇಕರ್‌ ಅನ್ನು ಕಳುಹಿಸಿ ಎಂದು ಕೇಳಿದ್ದಾರೆ.

ಹೀಗಾಗಿ ಜಯನಗರದಲ್ಲಿದ್ದ ರಾಮಚಂದ್ರರ ಮನೆಗೆ ಸಂತ್ರಸ್ತೆ ಹೋಗಿ, ಆ ರಾತ್ರಿ ರಾಮಚಂದ್ರರ ಪತ್ನಿಯನ್ನು ನೋಡಿಕೊಂಡು ಅಲ್ಲೇ ತಂಗಿದ್ದಾರೆ. ಸಂತ್ರಸ್ತೆ ರಾಮಚಂದ್ರರ ಪತ್ನಿ ಜತೆಗೆ ರೂಮಿನಲ್ಲಿ ಮಲಗಿದ್ದಾಗ, ಮಧ್ಯರಾತ್ರಿಯಂದು ಬಂದು ಅನುಚಿತವಾಗಿ ವರ್ತಿಸಿದ್ದಾರೆ. ನಂತರ ಸಂತ್ರಸ್ತೆ ಕೆಲಸಕ್ಕೆ ಅವರ ಮನೆಗೆ ಹೋಗುವುದನ್ನೇ ಬಿಟ್ಟು, ಮತ್ತೊಬ್ಬಳನ್ನು ಕೇರ್‌ ಟೇಕರ್‌ ಆಗಿ ಕಳಿಸಿದ್ದಳು. ಈ ಮಧ್ಯೆ ಆ ಕೇರ್‌ ಟೇಕರ್‌ ಊರಿಗೆ ಹೋದಾಗ ಅನಿರ್ವಾಯವಾಗಿ ಸಂತ್ರಸ್ತೆ ರಾಮಚಂದ್ರರ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಮಧ್ಯೆ ಸಂತ್ರಸ್ತೆಗೆ ಫೋನ್‌ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾರೆ. ಹೀಗೆ ಮನೆಗೆ ಬಂದ ಸಂತ್ರಸ್ತೆಗೆ ರಾಮಚಂದ್ರ ವೈನ್‌ನಲ್ಲಿ ಮತ್ತಿನೌಷಧಿ ಬೆರೆಸಿ ಕೊಟ್ಟಿದ್ದಾರೆ. ಆಕೆ ಕುಡಿಯುತ್ತಿದ್ದಂತೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದನ್ನು ಕಂಡು ಅಘಾತಕ್ಕೆ ಒಳಗಾಗಿದ್ದಾರೆ. ಅಲ್ಲೇ ಪಕ್ಕದಲ್ಲಿ ನೋಡಿದಾಗ ರಾಮಚಂದ್ರರೂ ನಗ್ನರಾಗಿದ್ದು ಕಂಡಿದೆ. ಈ ನಡುವೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಯಾರಿಗಾದರೂ ಈ ವಿಷಯ ಹೇಳಿದರೆ ಜತೆಗೆ ಇರುವ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.

ಇದನ್ನೂ ಓದಿ: Theft Case : ಬೆಂಗಳೂರಿಗರೇ ಎಚ್ಚರ; ಖಾಕಿ ಡ್ರೆಸ್‌ನಲ್ಲಿ ಬಂದು ದರೋಡೆ ಮಾಡ್ತಾರೆ ಹುಷಾರ್‌!

ಮಾತ್ರವಲ್ಲದೇ ಸಂತ್ರಸ್ತೆಗೆ ಹೆದರಿಸಿ ಬಳಿಕ 5 ಲಕ್ಷ ರೂ. ಚೆಕ್‌ ಅನ್ನು ನೀಡಿ, ಈ ಹಣವನ್ನು ವಾಪಸ್‌ ಕೊಡುವುದು ಬೇಡ. ಬದಲಿಗೆ ಬಿಸಿನೆಸ್‌ನಲ್ಲಿ ನನ್ನ ಪಾರ್ಟರ್‌ ಮಾಡಿಕೊಂಡು, ಬಂದ ಆದಾಯದಲ್ಲಿ ನನಗೆ 25% ಲಾಭಂಶದ ಹಣ ನೀಡುವಂತೆ ಹೇಳಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜತೆಗೆ ಸಂತ್ರಸ್ತೆಯ ಕಚೇರಿಯನ್ನೆಲ್ಲ ಆರೋಪಿ ಸುರ್ಪದಿಗೆ ಪಡೆದು ಎರಡನೇ ಬಾರಿಯೂ ಅತ್ಯಾಚಾರವೆಸಗಿದ್ದಾನೆ. ಆತನಿಂದ ಗರ್ಭಿಣಿಯಾದ ವಿಷಯವನ್ನು ತಿಳಿಸಿದಾಗ ನನಗೂ ಇದಕ್ಕೂ ಸಂಬಂಧವಿಲ್ಲ ಕೈತೊಳೆದುಕೊಂಡಿದ್ದಾರೆ. ಮತ್ತೆ ಸಂತ್ರಸ್ತೆಯ ಮನೆಗೆ ಬಂದು ನನ್ನ ಮೇಲೆ ದೂರು ನೀಡಬೇಡ, ಹೊಟ್ಟೆಯಲ್ಲಿರುವ ಮಗುವಿನ ಭವಿಷ್ಯದ ಬಗ್ಗೆ ಯೋಚಿಸು, ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ನನ್ನ ಕುಟುಂಬಸ್ಥರನ್ನು ಒಪ್ಪಿಸುವೆ ಎಂದೇಳಿ ಮೋಸ ಮಾಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಗನ್‌ ತೋರಿಸಿ ಬ್ಲ್ಯಾಕ್‌ಮೇಲ್‌!

ಈ ಪ್ರಕರಣ ಸಂಬಂಧ ದೂರು ದಾಖಲಿಸಿ ತಿಂಗಳಾನುಗಟ್ಟಲೆಯಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಪರ ವಕೀಲ ಬಾಲನ್ ಆರೋಪಿಸಿದ್ದಾರೆ. ರಾಮಚಂದ್ರ ತಮ್ಮ ಪತ್ನಿಗೆ ಮರೆವಿನ ಖಾಯಿಲೆ ಇದೆ ಎಂದು ಸಂತ್ರಸ್ತೆಯನ್ನು ಮನೆಯಲ್ಲಿ ಕೇರ್‌ ಟೇಕರ್‌ ಆಗಿ ನೇಮಕ ಮಾಡಿಕೊಂಡಿದ್ದರು.

ಈ ನಡುವೆ ಸಂತ್ರಸ್ತೆ ಮೇಲೆ ಕಣ್ಣಿಟ್ಟಿದ್ದ ರಾಮಚಂದ್ರ ವೈನ್‌ನಲ್ಲಿ ಮತ್ತಿನೌಷಧಿ ಬೆರಸಿ ಬಳಿಕ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಪ್ರಜ್ಞೆ ಬಂದಾಗ ತನ್ನ ಮೇಲೆ ನಡೆದಿದ್ದ ಕೌರ್ಯವನ್ನು ಖಂಡಿಸಲು ಮುಂದಾಗಿದ್ದಾರೆ. ಈ ವೇಳೆ ಗನ್ ತೋರಿಸಿ ಬೆದರಿಕೆ ಹಾಕಿ, ಬಾಯಿ ಮುಚ್ಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊಬೈಲ್‌ನಲ್ಲಿ ಮೆಸೇಜ್ ಎಕ್ಸ್‌ಚೆಂಜ್ ಎವಿಡೆನ್ಸ್ ಕೂಡ ಇದೆ. ಆದರೆ ಪೊಲೀಸರು ಸಂತ್ರಸ್ತೆಗೆ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲದೆ ಆಕೆಯ ಕುಟುಂಬದವರ ಮೇಲೆ ಕೂಡ ಕೇಸ್ ಹಾಕಿದ್ದಾರೆ. ಹೀಗಾಗಿ ಕೇಸ್‌ ಅನ್ನು ಸ್ಕ್ವಾಷ್ ಮಾಡುವುದಕ್ಕೆ ರಿಟ್ ಪಿಟಿಷನ್ ಹಾಕಿರುವುದಾಗಿ ಬಾಲನ್‌ ತಿಳಿಸಿದ್ದಾರೆ. ಶಿವಮೊಗ್ಗದಿಂದ ಇಲ್ಲಿಗೆ ಬಂದ ಹೆಣ್ಣು ಮಗಳ ಮೇಲೆ ಈ ರೀತಿ ಕೃತ್ಯ ನಡೆಸಿದ್ದಾರೆ. ಸದ್ಯಕ್ಕೆ ಇದೊಂದು ಘಟನೆ ಹೊರ ಬಂದಿದೆ, ಆದರೆ ಇನ್ನು ಇಂತಹ ಪ್ರಕರಣಗಳು ಹೆಚ್ಚಾಗಿರಬಹುದು ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version