Site icon Vistara News

Mahalaya 2022 | ಮಹಾಲಯ ಅಮಾವಾಸ್ಯೆ; ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿ ಪಿತೃ ತರ್ಪಣ

rituals in srirangapatna

ಮಂಡ್ಯ: ಇಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆ, ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿ ಜನಜಾತ್ರೆಯೇ ನೆರದಿದೆ. ಪಿತೃ ತರ್ಪಣ ನೀಡುವ ಸಲುವಾಗಿ ಇಲ್ಲಿನ ಪಶ್ಚಿಮ ವಾಹಿನಿ, ಸ್ನಾನಘಟ್ಟ, ಗೋಸಾಯಿ ಘಾಟ್​ ಮತ್ತು ಸಂಗಮಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಅಲ್ಲೀಗ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಸಾಮಾನ್ಯವಾಗಿ ಪ್ರತಿವರ್ಷ ಮಹಾಲಯ ಅಮಾವಾಸ್ಯೆ ದಿನ ಶ್ರೀರಂಗಪಟ್ಟಣದಲ್ಲಿ ಅಪಾರ ಜನರು ಸೇರುತ್ತಾರೆ. ತಮ್ಮ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಈ ಮಹಾಲಯ ಅಮಾವಾಸ್ಯೆ ದಿನ ತಿಲ ತರ್ಪಣ ನೀಡಿದರೆ ಅವರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ. ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಪೂರ್ವಿಕರು ವಸು-ರುದ್ರ-ಆದಿತ್ಯ ರೂಪದಲ್ಲಿ ಬಂದು ನಮ್ಮ ಕೃತಜ್ಞತೆ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನ ವಿಶೇಷವಾಗಿ ಆಯಾ ಪುಣ್ಯಕ್ಷೇತ್ರಗಳಿಗೆ ಹೋಗಿಯೇ ತರ್ಪಣ ನೀಡಲಾಗುತ್ತದೆ.

ಕೆಲವರು ಹಿರಿಯರ ಹಬ್ಬದಂದು ಹಿರಿಯರು ಬಹಳವಾಗಿ ಇಷ್ಟಪಡುತ್ತಿದ್ದ ಆಹಾರ, ಬಟ್ಟೆ, ಇನ್ನಿತರ ವಸ್ತುಗಳನ್ನು ವಿಶೇಷವಾಗಿ ಸಿದ್ಧಪಡಿಸಿ ಹಿರಿಕರಿಗೆ ಒಪ್ಪಿಸುತ್ತಾರೆ. ಅವರನ್ನು ತಮ್ಮದೇ ಆದ ಶೈಲಿಯಲ್ಲಿ ಉಪಚರಿಸುತ್ತಾರೆ. ಈ ನೆಪದಲ್ಲಿ ಕುಟುಂಬದವರೆಲ್ಲರೂ ಒಂದೆಡೆ ಸೇರಿ, ಪೂರ್ವಿಕರನ್ನು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Mahalaya 2022 | ಮಹಾಲಯದ ದಿನ ಹಿರಿಯರ ಪೂಜೆ ಹೇಗೆ? ಯಾರನ್ನೆಲ್ಲಾ ನೆನೆಯಬೇಕು?

Exit mobile version