Site icon Vistara News

ಹೆದ್ದೂರಿನಲ್ಲಿ ವಿದ್ಯುತ್‌ ಕಂಬದಿಂದ ಜಾರಿ ಬಿದ್ದು ಪವರ್‌ ಮ್ಯಾನ್‌ ಸಾವು, ಸಕಾಲದಲ್ಲಿ ದೊರೆಯದ ಆಂಬ್ಯುಲೆನ್ಸ್

suicide

ಶಿವಮೊಗ್ಗ: ಕೆಪಿಟಿಸಿಎಲ್‌ನಲ್ಲಿ ಪವರ್‌ ಮ್ಯಾನ್‌ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಕಂಬದಿಂದ ಬಿದ್ದು ಮೃತಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ದುರ್ಘಟನೆ ಸಂಭವಿಸಿದ್ದು, ರವಿ ನಾಯಕ(37) ಮೃತ ದುರ್ದೈವಿ.

ಅವರು ವಿದ್ಯುತ್‌ ಕಂಬದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಯಿತಾದರೂ ತಕ್ಷಣಕ್ಕೆ ಆಂಬ್ಯುಲೆನ್ಸ್‌ ಸಿಗಲಿಲ್ಲ. ಹೀಗಾಗಿ ಅವರು ದಾರಿ ಮಧ್ಯೆ ಪ್ರಾಣ ಕಳೆದುಕೊಂಡರು ಎಂದು ಹೇಳಲಾಗಿದೆ.

ರವಿ ಅವರು ಬಿದ್ದ ಕೂಡಲೇ ಅವರನ್ನು ಕಾರಿನಲ್ಲಿ ಕಟ್ಟೆಹಕ್ಕಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಅಲ್ಲಿಂದ ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆಸಲಾಯಿತಾದರೂ ಸಕಾಲದಲ್ಲಿ ಆಂಬ್ಯುಲೆನ್ಸ್‌ ಸಿಗಲಿಲ್ಲ. ಹೀಗಾಗಿ ಮತ್ತೆ ಕಾರಿನಲ್ಲೇ ಸಾಗಿಸಬೇಕಾಯಿತು. ಇದರಿಂದ ರವಿ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ಜೀವರಕ್ಷಣಾ ವ್ಯವಸ್ಥೆ ಇರುವ ಆಂಬ್ಯುಲೆನ್ಸ್‌ ಸಿಕ್ಕಿದ್ದರೆ ಪ್ರಾಣ ಉಳಿಸಬಹುದಿತ್ತು ಎಂದು ಜನರು ಹೇಳುತ್ತಿದ್ದು, ಆಕ್ರೋಶಿತರು ಆಸ್ಪತ್ರೆ ಮುಂದೆ ಧರಣಿಯನ್ನೂ ನಡೆಸಿದರು.

ಇದನ್ನೂ ಓದಿ | Boy death | ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

Exit mobile version