Site icon Vistara News

PSI Scam | ಸಚಿವರ ಹೆಸರು ಹೇಳಿ ತಪ್ಪಿಸಿಕೊಂಡಿದ್ದ ಅಭ್ಯರ್ಥಿ ಬಂಧನ

darshan gowda

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ (PSI Scam) ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿಯ ದರ್ಶನ್‌ ಗೌಡ ಬಂಧಿತ.

ಈ ಹಿಂದೆ ಈತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾಗ, ಸಚಿವರೊಬ್ಬರ ಹೆಸರು ಹೇಳಿದ್ದರಿಂದ ಪೊಲೀಸರು ಬಂಧಿಸಿರಲಿಲ್ಲ. ಆದರೆ ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ದರ್ಶನ್‌ಗೌಡನ ಬಂಧನವಾಗಿದೆ.

ಇದನ್ನೂ ಓದಿ | ಅಶ್ವತ್ಥನಾರಾಯಣಗೆ ತಾಕತ್ ಇದ್ದರೆ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ: H.D. ಕುಮಾರಸ್ವಾಮಿ ಸವಾಲು

ಆರೋಪಿ ವಿರುದ್ಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇದೇ ಪ್ರಕರಣದಲ್ಲಿ ಹರೀಶ್‌, ಮೋಹನ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ತನ್ನ ಮಗನನ್ನು ಪೊಲೀಸರು ಕುಣಿಗಲ್‌ ಬಳಿ ವಶಕ್ಕೆ ಪಡೆದಿದ್ದಾರೆ, ಅವನು ಯಾವುದೇ ತಪ್ಪು ಮಾಡಿಲ್ಲ ಎಂದು ದರ್ಶನ್‌ ಗೌಡ ತಂದೆ ವೆಂಕಟೇಶ್‌ ಹೇಳಿದ್ದಾರೆ.

ಓಎಂಆರ್‌ ಶೀಟ್‌ ತಿದ್ದಿದ್ದ ಆರೋಪದ ಹಿನ್ನೆಲೆಯಲ್ಲಿ ದರ್ಶನ್‌ಗೌಡ ಸೇರಿ 10 ಅಭ್ಯರ್ಥಿಗಳಿಗೆ ಪೊಲೀಸರು ನೊಟೀಸ್‌ ನೀಡಿದ್ದರು. ನೇಮಕಾತಿಯಲ್ಲಿ 4 ರ‍್ಯಾಂಕ್‌ ಪಡೆದಿದ್ದ ದರ್ಶನ್‌ಗೌಡ, ವಿಚಾರಣೆ ವೇಳೆ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಭಾವಿ ಸಚಿವರ ಸಹೋದರನಿಗೆ ₹80 ಲಕ್ಷ ಲಂಚ ನೀಡಿರುವುದಾಗಿ ಮಾಹಿತಿ ನೀಡಿದ್ದ. ಹೀಗಾಗಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಪ್ರಭಾವದಿಂದ ಈತನನ್ನು ಪೊಲೀಸರು ವಿಚಾರಣೆ ಮಾಡದೆ ಬಿಡುಗಡೆ ಮಾಡಿದ್ದರು ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡಿದ್ದರರಿಂದ ದರ್ಶನ್‌ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | ಸಚಿವ ಅಶ್ವತ್ಥನಾರಾಯಣ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಎಂದ ಹೆಚ್.ಡಿ. ಕುಮಾರಸ್ವಾಮಿ

Exit mobile version