Site icon Vistara News

ʼಅಪ್ಪು ಕಪ್‌ʼ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್‌ಗೆ ಪುನೀತ್‌ ಬೆಳ್ಳಿ ಪ್ರತಿಮೆ; ಎಂಎಲ್‌ಸಿ ಟಿ.ಎ. ಶರವಣ ಉಡುಗೊರೆ

ಅಪ್ಪು ಕಪ್‌

ಬೆಂಗಳೂರು: ನಗರದ ಇಂಡಿಯನ್ ಜಿಮ್‌ಖಾನ ಕ್ಲಬ್‌ನಲ್ಲಿ ಆಯೋಜಿಸಿರುವ ʼಅಪ್ಪು ಕಪ್ʼ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್‌ ವಿಜೇತರಿಗೆ ಬಹುಮಾನವಾಗಿ ನೀಡಲು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬೆಳ್ಳಿ ಪ್ರತಿಮೆಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಅವರು ಉಡುಗೊರೆಯಾಗಿ ನೀಡಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ʼಅಪ್ಪು ಕಪ್ʼ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್‌ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನ 1 ಲಕ್ಷ ರೂಪಾಯಿ, 2ನೇ ಬಹುಮಾನ 50 ಸಾವಿರ ರೂ.ಗಳನ್ನು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ನೀಡಲಾಗುತ್ತದೆ.

ಟಿ.ಎ.ಶರವಣ ಮಾತನಾಡಿ, ನವೆಂಬರ್ 6 ರಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸಮ್ಮುಖದಲ್ಲಿ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಲೀಗ್ ವಿಜೇತರಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬೆಳ್ಳಿ ಪ್ರತಿಮೆ ನೀಡಲಾಗುತ್ತದೆ. ಈ ಬೆಳ್ಳಿ ಪ್ರತಿಮೆಯನ್ನು ಪ್ರತಿ ವರ್ಷ ನಡೆಯುವ ಅಪ್ಪು ಕಪ್‌ನಲ್ಲಿ ವಿಜೇತರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Covaxin | ಕುಸಿದ ಬೇಡಿಕೆ, 20 ಕೋಟಿ ಕೋವಾಕ್ಸಿನ್‌ ಅವಧಿ ಮುಕ್ತಾಯ ನಿರೀಕ್ಷೆ

Exit mobile version