Site icon Vistara News

ಭಾರಿ ಮಳೆ ಮುನ್ಸೂಚನೆ: ಗ್ರಾಮ ತೊರೆಯುವಂತೆ NDRF ತಂಡದಿಂದ ಹೈ ಅಲರ್ಟ್

ಭಾರಿ ಮಳೆ ಮುನ್ಸೂಚನೆ

ರಾಯಚೂರು: ರಾಜ್ಯಾದಂತ ಮುಂಗಾರು ಆರಂಭವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ನದಿ ತೀರದ ಜನರಿಗೆ ನೆರೆಹಾವಳಿಯ ಎಚ್ಚರಿಕೆ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗ್ರಾಮಗಳು ಕೃಷ್ಣಾ ನದಿಯಿಂದ ಪ್ರತಿ ವರ್ಷ ದ್ವೀಪದಂತಾಗುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ನಡುಗಡ್ಡೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ನೆರೆ ಹಾವಳಿ ಶುರುವಾಗುತ್ತಿದೆ. ಈ ಭೀತಿಯಿಂದ ಯಳಗುಂದಿ, ಯರಗೋಡಿ, ಕರಕಲಗಡ್ಡಿ, ಗ್ರಾಮಸ್ಥರಿಗೆ ಆದಷ್ಟೂ ಬೇಗ ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಸೂಚನೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಹಾಗೆಯೇ ಲಿಂಗಸಗೂರು ತಾಲೂಕಿನ ಕೆಲ ಗ್ರಾಮಸ್ಥರಿಗೂ ಎಚ್ಚರಿಕೆ ನೀಡಲಾಗಿದ್ದು, ಇದೇ ಕಾರ್ಯಕ್ಕಾಗಿ ಜಿಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್‌ ತಂಡ ಗ್ರಾಮಕ್ಕೆ ಭೇಟಿ ನೀಡಿದೆ.

ಈ ಸಮಯದಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಮಗೆ ಶಾಶ್ವತ ಪರಿಹಾರ ನೀಡಿ, ಇಲ್ಲವಾದರೆ ಪರಿಹಾರ ಕಲ್ಪಿಸುವವರೆಗೂ ನಡುಗಡ್ಡೆ ಬಿಟ್ಟು ಬರುವುದಿಲ್ಲ ಎಂದು ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಗಂಟೆಗಳ ಭಾರಿ ಮಳೆಗೆ 1177 ಮನೆಗಳು ಜಲಾವೃತ

Exit mobile version