Site icon Vistara News

Rain News | ತುಂಗಭದ್ರಾ ಜಲಾಶಯ ಭರ್ತಿ: ಹಂಪಿಯಲ್ಲಿ ಪ್ರವಾಹ ಸ್ಥಿತಿ

Rain News

ವಿಜಯನಗರ: ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ (Rain News) ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿರುವುದರಿಂದ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಅಣೆಕಟ್ಟುಗಳಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ತುಂಗಭದ್ರಾ ಜಲಾಶಯ ಭರ್ತಿ ಆಗಿದ್ದು, ಜಲಾಶಯದಿಂದ 1,44,195 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯಕ್ಕೆ 1,58,400 ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. 94.514 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹಗೊಂಡಿದೆ. ಆದ್ದರಿಂದ ಜಲಾಶಯದಿಂದ ಅಪಾರ ನೀರು ಬಿಡುಗಡೆ ಮಾಡಿದೆ. ಇದರ ಪರಿಣಾಮ ಇತಿಹಾಸ ಪ್ರಸಿದ್ಧ ಹಂಪಿ ಬಳಿ ಪ್ರವಾಹದಂತೆ ನದಿ ಹರಿಯುತ್ತಿದೆ.

ಇದನ್ನೂ ಓದಿ | Rain News | ‌ಭರ್ತಿಯತ್ತ ಜಲಾಶಯಗಳು, ಹೆಚ್ಚಾದ ಹೊರಹರಿವು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ

Exit mobile version