Site icon Vistara News

Kannada Rajyotsava: ಇಸ್ರೋ ಅಧ್ಯಕ್ಷ ಸೋಮನಾಥ್‌ ಸೇರಿ ಸಾಧಕ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Rajyotsava award to isro chairman S Somanath

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ (Kannada Rajyotsava) ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌, ನ್ಯಾ. ಗೋಪಾಲಗೌಡ ಸೇರಿ ವಿವಿಧ ಕ್ಷೇತ್ರಗಳ 68 ಸಾಧಕರು ಮತ್ತು 10 ಕನ್ನಡ ಪರ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳ ಸಾಧಕ ಹಾಗೂ ಸಂಸ್ಥೆಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಶಿವರಾಜ್ ತಂಗಡಗಿ, ಡಾ.ಜಿ. ಪರಮೇಶ್ವರ, ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು

ನ್ಯಾಯಮೂರ್ತಿ ಗೋಪಾಲಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ | Gadag News: ಮದುವಣಗಿತ್ತಿಯಂತೆ ಬಸ್ ಸಿಂಗರಿಸಿ, ಕನ್ನಡಾಭಿಮಾನ ಮೆರೆದ ಚಾಲಕ

ಇದನ್ನೂ ಓದಿ | Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ

ಪ್ರಶಸ್ತಿ ಪ್ರದಾನ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಜತೆ ಚಹಾ ಕೂಟದಲ್ಲಿ ಪಾಲ್ಗೊಂಡರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಚಹಾಕೂಟದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಡಾ ಜಿ. ಪರಮೇಶ್ವರ, ಶಿವರಾಜ್ ತಂಗಡಗಿ, ಕೆ ಎಚ್ ಮುನಿಯಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಮತ್ತಿತರರು ಜತೆಯಾಗಿದ್ದರು.

ವಿಜ್ಞಾನಿಯಿಂದ ಪತ್ರಿಕಾ ವಿತರಕರವರೆಗೆ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಇಲ್ಲಿದೆ

ಸಂಗೀತ- ನೃತ್ಯ

1. ಡಾ ನಯನ್ ಎಸ್​ ಮೋರೆ (ಬೆಂಗಳೂರು)
2. ನೀಲಾ ಎಮ್​ ಕೊಡ್ಲಿ (ಧಾರವಾಡ)
3. ಶಬ್ಬೀರ್ ಅಹಮದ್​ (ಬೆಂಗಳೂರು)
4. ಡಾ ಎಸ್​ ಭಾಳೇಶ ಭಜಂತ್ರಿ (ಬೆಳಗಾವಿ)

ಚಲನಚಿತ್ರ

1. ಡಿಂಗ್ರಿ ನಾಗರಾಜ್​ (​ಬೆಂಗಳೂರು)
2. ಬಿ. ಜನಾರ್ಧನ (ಬ್ಯಾಂಕ್ ಜನಾರ್ದನ)

ರಂಗಭೂಮಿ

1. ಎ.ಜಿ ಚಿದಂಬರ ರಾವ್ ಜಂಬೆ (ಶಿವಮೊಗ್ಗ)
2. ಪಿ ಗಂಗಾಧರ ಸ್ವಾಮಿ (ಮೈಸೂರು)
3. ಎಚ್ ಬಿ ಸರೊಜಮ್ಮ (ಧಾರವಾಡ)
4. ತಯ್ಯಬ್​ಖಾನ್​ ಎಂ ಇನಾಮದಾರ( ಬಾಗಲಕೋಟೆ)
5. ಡಾ ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)
6. ಪಿ ತಿಪ್ಪೇಸ್ವಾಮಿ (ಚಿತ್ರದುರ್ಗ)

ಶಿಲ್ಪ ಕಲೆ/ ಚಿತ್ರ ಕಲೆ/ ಕರಕುಶಲ

1.ಟಿ ಶಿವಶಂಕರ್​ (ದಾವಣಗೆರೆ)
2.ಕಾಳಪ್ಪ ವಿಶ್ವಕರ್ಮ (ರಾಯಚೂರು)
3.ಮಾರ್ಥಾ ಜಾಕಿಮೊವಿಚ್​ (ಬೆಂಗಳೂರು)
4.ಪಿ ಗೌರಯ್ಯ (ಮೈಸೂರು)

ಜಾನಪದ

1. ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ- ಉತ್ತರ ಕನ್ನಡ
2. ಶಿವಂಗಿ ಶಣ್ಮರಿ- ದಾವಣಗೆರೆ
3. ಮಹದೇವು- ಮೈಸೂರು
4. ನರಸಪ್ಪಾ- ಬೀದರ್‌
5. ಶಕುಂತಲಾ ದೇವಲಾನಾಯಕ- ಕಲಬುರಗಿ
6. ಎಚ್‌.ಕೆ. ಕಾರಮಂಚಪ್ಪ- ಬಳ್ಳಾರಿ
7. ಶಂಭು ಬಳಿಗಾರ- ಗದಗ
8. ವಿಭೂತಿ ಗುಂಡಪ್ಪ-ಕೊಪ್ಪಳ
9. ಚೌಡಮ್ಮ-ಚಿಕ್ಕಮಗಳೂರು

ಸಮಾಜಸೇವೆ

1. ಹುಚ್ಚಮ್ಮ ಬಸಪ್ಪ ಚೌದ್ರಿ- ಕೊಪ್ಪಳ
2. ಚಾರ್ಮಾಡಿ ಹಸನಬ್ಬ- ದಕ್ಷಿಣ ಕನ್ನಡ
3. ಕೆ ರೂಪ್ಲಾ ನಾಯಕ್‌- ದಾವಣಗೆರೆ
4. ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ- ಬೆಳಗಾವಿ
5. ನಾಗರಾಜು.ಜಿ- ಬೆಂಗಳೂರು

ಆಡಳಿತ

1. ಜಿ.ವಿ ಬಲರಾಮ್‌- ತುಮಕೂರು

ವೈದ್ಯಕೀಯ

1. ಡಾ. ಸಿ ರಾಮಚಂದ್ರ- ಬೆಂಗಳೂರು
2. ಡಾ. ಪ್ರಶಾಂತ್‌ ಶೆಟ್ಟಿ- ದಕ್ಷಿಣ ಕನ್ನಡ

ಸಾಹಿತ್ಯ

1. ಪ್ರೊ. .ಸಿ. ನಾಗಣ್ಣ- ಚಾಮರಾಜನಗರ
2. ಸುಬ್ಬು ಹೊಲೆಯಾರ್‌ – ಹಾಸನ
3. ಸತೀಶ ಕುಲಕರ್ಣಿ- ಹಾವೇರಿ
4.ಲಕ್ಷ್ಮೀಪತಿ ಕೋಲಾರ- ಕೋಲಾರ
5. ಪರಪ್ಪ ಗುರುಪಾದಪ್ಪ ಸಿದ್ಧಾಪುರ- ವಿಜಯಪುರ
6.ಡಾ.ಕೆ. ಷರೀಫಾ – ಬೆಂಗಳೂರು

ಶಿಕ್ಷಣ

1.ರಾಮಪ್ಪ (ರಾಮಣ್ಣ) ಹವಳೆ – ರಾಯಚೂರು
2. ಕೆ. ಚಂದ್ರಶೇಖರ್‌ – ಕೋಲಾರ
3. ಕೆ.ಟಿ. ಚಂದು- ಮಂಡ್ಯ

ಕ್ರೀಡೆ

1. ಕುಮಾರಿ ದಿವ್ಯಾ ಟಿ.ಎಸ್.-‌ ಕೋಲಾರ
2. ಅದಿತಿ ಅಶೋಕ್‌ – ಬೆಂಗಳೂರು
3. ಅಶೊಕ್‌ ಗದಿಗೆಪ್ಪ ಎಣಗಿ – ಧಾರವಾಡ

ನ್ಯಾಯಾಂಗ

1.ಜ.ವಿ. ಗೋಪಾಲಗೌಡ- ಚಿಕ್ಕಬಳ್ಳಾಪುರ

ಪರಿಸರ

1. ಸೋಮನಾಥರೆಡ್ಡಿ ಪೂರ್ಮಾ – ಕಲಬುರಗಿ
2. ದ್ಯಾವನಗೌಡ ಟಿ. ಪಾಟೀಲ- ಧಾರವಾಡ
3. ಶಿವರೆಡ್ಡಿ ಹನುಮರೆಡ್ಡಿ ವಾಸನ- ಬಾಗಲಕೋಟೆ

ಸಂಕೀರ್ಣ

1. ಎಂ.ಎಂ.ಮದರಿ- ವಿಜಯಪುರ
2. ಹಾಜಿ ಹಬ್ದುಲ್ಲಾ ಪರ್ಕಳ- ಉಡುಪಿ
3. ಮಿಮಿಕ್ರಿ ದಯಾನಂದ್-‌ ಮೈಸೂರು
4. ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್-‌ ಮೈಸೂರು
5. ಲೆ.ಜ. ಕೊಡನ ಪೂವಯ್ಯ ಕಾರ್ಯಪ್ಪ- ಕೊಡಗು

ಮಾಧ್ಯಮ ಕ್ಷೇತ್ರ

1.ದಿನೇಶ್‌ ಅಮೀನ್‌ ಮಟ್ಟು -ದಕ್ಷಿಣ ಕನ್ನಡ
2. ಜವರಪ್ಪ: ಮೈಸೂರು
3. ಮಾಯಾ ಶರ್ಮ: ಬೆಂಗಳೂರು
4. ರಫೀ ಭಂಡಾರಿ: ವಿಜಯಪುರ

ಕ್ಷೇತ್ರ: ವಿಜ್ಞಾನ/ತಂತ್ರಜ್ಞಾನ

1.ಎಸ್‌ ಸೋಮನಾಥ್‌ (ಇಸ್ರೋ ಅಧ್ಯಕ್ಷರು): ಬೆಂಗಳೂರು
2.ಪ್ರೊ. ಗೋಪಾಲನ್‌ ಜಗದೀಶ್‌: ಚಾಮರಾಜ ನಗರ

ಹೊರನಾಡು/ಹೊರದೇಶ

1.ಸೀತಾರಾಮ ಅಯ್ಯಂಗಾರ್‌
2. ದೀಪಕ್‌ ಶೆಟ್ಟಿ
3. ಶಶಿಕಿರಣ್‌ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು

1. ಪುಟ್ಟಸ್ವಾಮಿಗೌಡ: ರಾಮನಗರ

ಸಂಘ- ಸಂಸ್ಥೆಗಳು

  1. ಕರ್ನಾಟಕ ಸಂಘ – ಶಿವಮೊಗ್ಗ
  2. ಬಿ.ಎನ್‌. ಶ್ರೀರಾಮ ಪುಸ್ತಕ ಪ್ರಕಾಶನ – ಮೈಸೂರು
  3. ಮಿಥಿಕ್‌ ಸೊಸೈಟಿ – ಬೆಂಗಳೂರು
  4. ಕರ್ನಾಟಕ ಸಾಹಿತ್ಯ ಸಂಘ – ಯಾದಗಿರಿ
  5. ಮೌಲಾನಾ ಆಜಾದ್‌ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ – ದಾವಣಗೆರೆ
  6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ – ದಕ್ಷಿಣ ಕನ್ನಡ
  7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ – ಬಾಗಲಕೋಟೆ
  8. ಚಿಣ್ಣರ ಬಿಂಬ – ಮುಂಬೈ
  9. ಮಾರುತಿ ಜನಸೇವಾ ಸಂಘ – ದಕ್ಷಿಣ ಕನ್ನಡ
  10. ವಿದ್ಯಾದಾನ ಸಮಿತಿ – ಗದಗ

ಈ ಸಂಗತಿಯ ಕುರಿತು ಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version