Site icon Vistara News

Child Death : ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಮಗು ಸಾವು

yathbik dead

ರಾಮನಗರ: ಜ್ಯೂಸ್ ಎಂದು ಕೀಟನಾಶಕ (Pesticide) ಸೇವಿಸಿದ 2 ವರ್ಷದ ಗಂಡು ಮಗುವೊಂದು (Child Death) ದಾರುಣವಾಗಿ ಮೃತಪಟ್ಟಿದೆ. ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ. ಗ್ರಾಮದ ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್ (2) ಮೃತ ದುರ್ದೈವಿ.

ಜಮೀನಿಗೆ ಸಿಂಪಡಿಸಲು ಕೀಟನಾಶಕ ತಂದಿದ್ದರು. ಅದ್ಹೇಗೋ ಯಶ್ವಿಕ್‌ ಕೈಗೆ ಈ ಕೀಟನಾಶಕದ ಬಾಟಲಿ ಸಿಕ್ಕಿದೆ. ಜ್ಯೂಸ್‌ ಇರಬಹುದು ಎಂದು ತಿಳಿದ ಯಶ್ವಿಕ್‌ ಕೀಟನಾಶಕವನ್ನು ಕುಡಿದು ಬಿಟ್ಟಿದೆ. ಕೀಟನಾಶಕ ಕುಡಿದ ಪರಿಣಾಮ ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದೆ.

ಕೂಡಲೇ ಪೋಷಕರು ಯಶ್ವಿಕ್‌ನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೀಟನಾಶಕ ದೇಹದೊಳಗೆ ಪೂರ್ತಿ ಸೇರಿದ್ದರಿಂದ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ. ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version