Site icon Vistara News

ವಿಸ್ತಾರ ನ್ಯೂಸ್‌ ಕಚೇರಿಗೆ ರಣದೀಪ್‌​ ಸಿಂಗ್ ಸುರ್ಜೇವಾಲ ಭೇಟಿ; ವಿಸ್ತಾರ ತಂಡದ ಕಾರ್ಯಕ್ಕೆ ಮೆಚ್ಚುಗೆ

Randeep Singh Surjewala visits Vistara News office Appreciation for the work done by the expansion team

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲ (Ranadeep singh surjewala) ಅವರು ವಿಸ್ತಾರ ನ್ಯೂಸ್ ಕಚೇರಿಗೆ ಬುಧವಾರ ಸೌಹಾರ್ದಯುತ ಭೇಟಿ ನೀಡಿದರು. ಯುಗಾದಿ ಹಬ್ಬದ ದಿನದಂದು ಕಚೇರಿಗೆ ಆಗಮಿಸಿದ ಅವರು ವಿಸ್ತಾರ ನ್ಯೂಸ್​ನ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಮಾತನಾಡಿ ಯುಗಾದಿ ಶುಭಾಶಯ ಕೋರಿದರು.

ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಸುರ್ಜೇವಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸ್ಟುಡಿಯೋ ಸೇರಿದಂತೆ ಕಚೇರಿಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ, ತಂಡದ ಕಾರ್ಯವಿಧಾನ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಸೇರಿದಂತೆ ಹಲವು ವಿಚಾರಗಳ ವಿವರಣೆಯನ್ನು ಪಡೆದುಕೊಂಡರು.

ರಣದೀಪ್‌ ಸುರ್ಜೇವಾಲ ಅವರು ವಿಸ್ತಾರ ನ್ಯೂಸ್‌ನ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ವಿಸ್ತಾರ ನ್ಯೂಸ್​ನ ಹಿರಿಯ ಸಹೋದ್ಯೋಗಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಸುರ್ಜೇವಾಲ ಅವರು, ವಿಭಿನ್ನವಾಗಿ ಹಾಗೂ ನಿಷ್ಪಕ್ಷಪಾತವಾಗಿ ಸುದ್ದಿ ಪ್ರಸ್ತುತಪಡಿಸುತ್ತಿರುವ ವಿಸ್ತಾರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಸ್ತಾರ ನ್ಯೂಸ್‌ ಕಚೇರಿಗೆ ಬಿ.ಎಸ್‌.ಯಡಿಯೂರಪ್ಪ, ವಿಜಯೇಂದ್ರ ಭೇಟಿ; ಶುಭ ಹಾರೈಕೆ

ಅಲ್ಲದೆ, ವಿಸ್ತಾರ ನ್ಯೂಸ್‌ ವೆಬ್‌ಸೈಟ್‌, ಯೂಟ್ಯೂಬ್‌ ಚಾನೆಲ್‌ಗಳ ಬಗ್ಗೆ ತಿಳಿದುಕೊಂಡ ಅವರು, ಡಿಜಿಟಲ್‌ ಕ್ಷೇತ್ರದಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಜನರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್​ ಅರ್ಷದ್​, ವಿಧಾನ ಪರಿಷತ್​ ಸದಸ್ಯ ದಿನೇಶ್​ ಗೂಳಿಗೌಡ ಉಪಸ್ಥಿತರಿದ್ದರು.

Exit mobile version