ಬೆಂಗಳೂರು: ಯುವ ಉದ್ಯಮಿ ಮತ್ತು ವಿದ್ಯಾಶಿಲ್ಪ ಎಜುಕೇಷನ್ ಗ್ರೂಪ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಪೈ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರನ್ನು ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಸ್ತಾರ ಮೀಡಿಯಾ ಸಂಸ್ಥೆಯಿಂದ ರೂಪುಗೊಂಡಿರುವ ವಿಸ್ತಾರ ನ್ಯೂಸ್ ಟಿವಿ ಚಾನೆಲ್, ವಿಸ್ತಾರ ಡಿಜಿಟಲ್ ಮತ್ತು ವಿವಿಧ ಉಪಯುಕ್ತ ವಿಷಯಗಳ ಕುರಿತ ಯುಟ್ಯೂಬ್ ಚಾನೆಲ್ಗಳ ಗುಣಮಟ್ಟದ ಕುರಿತು ರವೀಂದ್ರ ಪೈ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ರವೀಂದ್ರ ಪೈ ಅವರಿಗೆ ವಿಸ್ತಾರ ನ್ಯೂಸ್ ಅಳವಡಿಸಿಕೊಂಡಿರುವ ಅತ್ಯಾಧುನಿಕ ವ್ಯವಸ್ಥೆಯ ಮಾಹಿತಿ ನೀಡಿದರು.
ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ ಎಸ್, ಸಿಒಒ, ಸಿಟಿಒ ಪರಶುರಾಮ್, ವಿಪಿ-ಮಾರ್ಕೆಟಿಂಗ್ ಸಿ ಎಂ ನವನೀತ್, ಇನ್ ಫುಟ್-ಔಟ್ ಫುಟ್ ಮುಖ್ಯಸ್ಥ ಮಂಜುನಾಥ್ ಪಿ, ವಿಸ್ತಾರ ಡಿಜಿಟಲ್ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನಲ್ ಎಡಿಟರ್ ಕಿರಣ್ ಕುಮಾರ್ ಡಿ ಕೆ, ಪಾಲಿಟಿಕಲ್ ಬ್ಯೂರೊ ಮುಖ್ಯಸ್ಥ ಮಾರುತಿ ಪಾವಗಡ ಜತೆಗಿದ್ದರು.
ಇದನ್ನೂ ಓದಿ | Vistara News Launch | ವಿಸ್ತಾರ ರಾಜ್ಯಾದ್ಯಂತ ವಿಸ್ತರಿಸಲಿ: ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ