Site icon Vistara News

Road Accident: ಕಾರು-ಬೈಕ್‌ ನಡುವೆ ಅಪಘಾತ; ಬೈಕ್‌ ಸವಾರ ಸ್ಥಳದಲ್ಲೇ ಸಾವು

ಯಾದಗಿರಿ: ಇಲ್ಲಿನ ಗುರುಮಠಕಲ್ ಪಟ್ಟಣದ ಅಯ್ಯಪ್ಪ ಸ್ವಾಮಿ ಗುಡಿ ಕ್ರಾಸ್ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ.

ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಭೀಮೇಶಪ್ಪ ಅಶಪ್ಪ ಜೆಟಿನೊಳ (45) ಮೃತ ದುರ್ದೈವಿ.

ತೆಲಂಗಾಣ ನೋಂದಣಿಯ ಕಾರು-ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ಬದಿಗೆ ಹಾರಿದೆ. ಭೀಮೇಶಪ್ಪ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident: ಟಿಪ್ಪರ್-ಇನ್ನೋವಾ‌ ಕಾರಿನ ಮಧ್ಯೆ ಅಪಘಾತ; ಸ್ಥಳದಲ್ಲೇ ಒಬ್ಬರ ಸಾವು, ಇಬ್ಬರು ಗಂಭೀರ

Exit mobile version