Site icon Vistara News

Road Accident: ಬೈಕ್‌ಗೆ ಕಾರು ಡಿಕ್ಕಿ ಬ್ಯಾಂಕ್‌ ಕ್ಯಾಶಿಯರ್‌ ದುರ್ಮರಣ; ಕಾರು ಚಾಲಕ ಪರಾರಿ

Road Accident

ಧಾರವಾಡ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ (Road Accident) ಘಟನೆ ಶಿವಳ್ಳಿ ಗ್ರಾಮದ ಬಳಿ ನಡೆದಿದೆ. ಬಸವರಾಜ ಮೃತ ದುರ್ದೈವಿ.

ಬ್ಯಾಂಕಿನ ಕೆಲಸ ಮುಗಿಸಿ ಹುಬ್ಬಳ್ಳಿಗೆ ಬೈಕಿನಲ್ಲಿ ಹೊರಟಿದ್ದ ಕ್ಯಾಶಿಯರ್‌ ಬಸವರಾಜ್‌ ಅವರಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದಾಗಿ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಉದ್ಯೋಗಿಯಾಗಿದ್ದ ಬಸವರಾಜ, ಮೂಲತಃ ಮೊರಬದ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಅವರು ಮೊರಬದಿಂದ ಹುಬ್ಬಳ್ಳಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಇತ್ತ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಚಾಲಕ ಘಟನೆ ನಡೆಯುತ್ತಿದ್ದಂತೆ ಪರಾರಿ ಆಗಿದ್ದಾನೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Leopard trapped | ಮಂಡ್ಯದ ಮರಕಾಡದೊಡ್ಡಿಯಲ್ಲಿ ರಾತ್ರಿ ಚಿರತೆ ಪ್ರತ್ಯಕ್ಷ; ರಾಮನಗರದಲ್ಲಿ ಬೆಳಗ್ಗೆ ಬೋನಿಗೆ ಬಿತ್ತು!

Exit mobile version