Site icon Vistara News

Road Accident : ಬೈಕ್‌ ಸ್ಕಿಡ್‌ ಆಗಿ ಬಿಜೆಪಿ ಪ್ರಚಾರ ವಾಹನಕ್ಕೆ ಡಿಕ್ಕಿ; ಸವಾರ ಸಾವು

bjp vehical accident

ಮಂಗಳೂರು: ಬಂಟ್ವಾಳದ ಮೆಲ್ಕಾರ್ ನರಹರಿ ಬೆಟ್ಟದ ಬಳಿ ಬಿಜೆಪಿ ಪ್ರಚಾರ ವಾಹನಕ್ಕೆ ಬೈಕ್ ಸ್ಕಿಡ್‌ ಆ ಡಿಕ್ಕಿಯಾಗಿ (Road Accident) ಸವಾರ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಮೂಲದ ವಿಜಿತ್ (35) ಮೃತಪಟ್ಟ ಯುವಕ. ಬಂಟ್ವಾಳದಿಂದ ಶಾಸಕ ರಾಜೇಶ್ ನಾಯ್ಕ್ ಅವರ ಪಾದಯಾತ್ರೆ ಆರಂಭವಾಗಿತ್ತು. ಇದಕ್ಕಾಗಿ ಅವರು ಗುಜರಾತ್‌ನಿಂದ ಪ್ರಚಾರದ ವಾಹನವನ್ನು ತಂದಿದ್ದರು. ಇದೇ ವೇಳೆ ವಿಜಿತ್‌ ಬೈಕ್‌ನಲ್ಲಿ ವೇಗವಾಗಿ ಬಂದಿದ್ದು, ಎದುರಿಗೆ ಬಿಜೆಪಿ ವಾಹನ ಬಂದಿದೆ. ಆಗ ತಿರುವೂ ಇದ್ದರಿಂದ ಬೈಕ್‌ ಸ್ಕಿಡ್‌ ಆಗಿ ಬಿಜೆಪಿ ಪ್ರಚಾರ ವಾಹನಕ್ಕೆ ಡಿಕ್ಕಿಯಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವಿಜಿತ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ | ಮುಂದಿನ ಬಾರಿ ಪ್ರಧಾನಿ ಆಗುವವರು ಯಾರೆಂದು ಗುಜರಾತ್​ ಚುನಾವಣಾ ಫಲಿತಾಂಶವೇ ಹೇಳಿದೆ ಎಂದ ಗೃಹ ಸಚಿವ ಅಮಿತ್​ ಶಾ

Exit mobile version