Site icon Vistara News

Road accident | ಕಾಲೇಜು ಬಸ್ ಓವರ್‌ಟೇಕ್ ಮಾಡಲು ಹೋಗಿ ಹಿಂದಿನ ಚಕ್ರದಡಿಗೆ ಬಿದ್ದು ವಿದ್ಯಾರ್ಥಿ ಸಾವು

Ballary accident prashanth

ಬಳ್ಳಾರಿ: ಕಾಲೇಜು ಬಸ್ಸನ್ನು ಓವರ್‌ಟೇಕ್‌ ಮಾಡಲು ಹೋದ ವಿದ್ಯಾರ್ಥಿಯೊಬ್ಬ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ (Road accident) ಮೃತಪಟ್ಟಿದ್ದಾನೆ. ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಬಸವರಾಜೇಶ್ವರಿ ಕಾಲೇಜಿ‌ನ ಪಿಯುಸಿ ವಿದ್ಯಾರ್ಥಿ ಜಾಲಿಹಾಳ್ ಗ್ರಾಮದ ಪ್ರಶಾಂತ್ ಕುಮಾರ್(18) ಮೃತ ಹುಡುಗ. ಈತ ಮತ್ತು ಪ್ರವೀಣ್‌ ಕುಮಾರ್‌ ಎಂಬ ಅವನದೇ ತರಗತಿಯ ವಿದ್ಯಾರ್ಥಿ ಬೈಕ್‌ನಲ್ಲಿ ಹೋಗುತ್ತಿದ್ದರು. ಎದುರಿಗೆ ಕಾಲೇಜು ಬಸ್‌ ಹೋಗುತ್ತಿತ್ತು. ಉತ್ಸಾಹದಲ್ಲಿ ಅದನ್ನು ಓವರ್‌ ಟೇಕ್‌ ಮಾಡಲು ಹೋಗಿ ಆಯತಪ್ಪಿ ಬಿದ್ದರು. ಇವರಲ್ಲಿ ಪ್ರಶಾಂತ್‌ ಬಸ್ಸಿನ ಚಕ್ರದಡಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಪ್ರವೀಣ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಳ್ಳಾರಿಯಲ್ಲಿ ಅಪಘಾತ ನಡೆದ ಜಾಗ

ವಿದ್ಯಾರ್ಥಿಗಳು ಕಾಲೇಜಿನ ವಾರ್ಷಿಕೋತ್ಸವ ಮುಗಿಸಿಕೊಂಡು ಸಂಭ್ರಮದಿಂದ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಸ್ಕೂಟಿಯಲ್ಲಿ ತೆರಳುತ್ತಿದ್ದ ದಂಪತಿಗೆ ಯಮಸ್ವರೂಪಿಯಾದ ಕಂಟೇನರ್‌; ಪತ್ನಿ ಸಾವು, ಪತಿ ಸ್ಥಿತಿ ಗಂಭೀರ

Exit mobile version