Site icon Vistara News

Road Accident: ಮೂರು ಪ್ರತ್ಯೇಕ ಅಪಘಾತ, ಐದು ಮಂದಿ ಸಾವು

kalaburagi accident

ಕಲಬುರಗಿ: ರಸ್ತೆ ಬದಿ ಕೆಟ್ಟು ನಿಂತಿದ್ದ ಗೂಡ್ಸ್ ವಾಹನ ರಿಪೇರಿ ಮಾಡುತ್ತಿರುವಾಗ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿಯಾದ (Road Accident) ಪರಿಣಾಮ ಸ್ಥಳದಲ್ಲೆ ಮೂವರು ದಾರುಣವಾಗಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಕಲಬುರಗಿ (kalaburagi news) ಜಿಲ್ಲೆ ಸೇಡಂ ತಾಲೂಕಿನ ಇವಣಿ ಬಳಿ ಘಟನೆ ನಡೆದಿದೆ. ಮೃತಪಟ್ಟವರನ್ನು ಪ್ರಶಾಂತ, ವಿಠಲ್, ಮಂಗ್ಲಿ ಎಂದು ಗುರುತಿಸಲಾಗಿದೆ. ಮೃತರು ಬೀದರ್ ಹಾಗೂ ಹೈದರಾಬಾದ್ ಮೂಲದವರು.

ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದ್‌ಗೆ ತೆರಳುತ್ತಿದ್ದ ಗೂಡ್ಸ್ ವಾಹನ ಇವಣಿ ಬಳಿ ಕೆಟ್ಟು ನಿಂತಿದ್ದರಿಂದ ರಿಪೇರಿ ಮಾಡಲು ರಸ್ತೆ ಬದಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ, ಬೈಕ್‌ ಸವಾರ ಮೃತ್ಯು

ಬಾಗಲಕೋಟೆ: ಕಾರು- ಬೈಕ್ ನಡುವೆ ನಡೆದ ಅಪಘಾತದಲ್ಲಿ, ಬೈಕ್‌ನಲ್ಲಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲಿಯೇ ದುರ್ಮರಣ ಕಂಡಿದ್ದಾರೆ. ಪಾಂಡು ಅನವಾಲ (29) ದುರ್ಮರಣಕ್ಕೀಡಾಗಿರುವ ದೈಹಿಕ ಶಿಕ್ಷಕ.

ಬಾಗಲಕೋಟೆ (Bagalakote news) ತಾಲ್ಲೂಕಿನ ಚಿಕ್ಕಸಂಶಿ ಕ್ರಾಸ್‌ನಲ್ಲಿ ಅಪಘಾತ ನಡೆದಿದೆ. ಮೃತ ಶಿಕ್ಷಕ ಪಾಂಡು ತುಳಸಿಗೇರಿ ಗ್ರಾಮದ ನಿವಾಸಿಯಾಗಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿಯ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ, ಬೈಕ್‌ ಸವಾರ ಸಾವು

ಧಾರವಾಡ: ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ಧಾರವಾಡ ಜಿಲ್ಲೆಯ (Dharwad news) ನವಲಗುಂದ ತಾಲೂಕಿನ ಅಣ್ಣಿಗೇರಿ ರಸ್ತೆಯಲ್ಲಿ ಘಟನೆ ನಡೆದಿದೆ. ನವಲಗುಂದದ ಹೊರವಲಯದಲ್ಲಿ ಅಪಘಾತ ನಡೆದಿದೆ. ಪೊಲೀಸರು ಅಪರಿಚಿತ ವಾಹನ ಹಾಗೂ ಮೃತ ಬೈಕ್‌ ಸವಾರನ ಗುರುತು ಪತ್ತೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Police Assault: ಹೆಲ್ಮೆಟ್ ಹಾಕದ ಲಾಯರ್ ಮೇಲೆ ಪೊಲೀಸರಿಂದ ಹಲ್ಲೆ, ಪ್ರತಿಭಟನೆ, 6 ಪೊಲೀಸರ ಅಮಾನತು

Exit mobile version