Site icon Vistara News

Road Accident | ಸಿಂಧನೂರಿನಲ್ಲಿ ಭೀಕರ ರಸ್ತೆ ಅಪಘಾತ; ಟಿಪ್ಪರ್‌ ಚಕ್ರದಡಿ ಸಿಲುಕಿ ಬೈಕ್‌ ಸವಾರರಿಬ್ಬರ ಸಾವು

ರಾಯಚೂರು: ಇಲ್ಲಿನ ಸಿಂಧನೂರು ನಗರದ ಸಾಸಲಮರಿ ಕ್ಯಾಂಪ್ ಬಳಿ ಟಿಪ್ಪರ್‌ ವಾಹನವೊಂದು ಬೈಕ್‌ಗೆ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮವಾಗಿ ಸವಾರರಿಬ್ಬರು ಟಿಪ್ಪರ್‌ ವಾಹನದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೈಕ್‌ ಸವಾರರು ಡಿಸೇಲ್‌ ತೆಗೆದುಕೊಂಡು ವಾಪಸ್‌ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಟಿಪ್ಪರ್ ಚಕ್ರದಡಿ ಸಿಲುಕಿದ ಮೃತದೇಹಗಳನ್ನು ಹಿಟಾಚಿ ಸಹಾಯದಿಂದ ಹೊರ ತೆಗೆದರು. ಬಳಿಕ‌ ಸಿಂಧನೂರಿನ ಸರಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದರು.

ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ಜತೆಗೆ ಸ್ಥಳೀಯರು ವಾಗ್ವಾದ ನಡೆಸಿದರು. ಘಟನೆಗೆ ಕಾರಣರಾದವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟು ಹಿಡಿದರು. ಸಿಂಧನೂರು ಬಳಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಆ ಕೆಲಸಕ್ಕೆ ಬರುತ್ತಿದ್ದ ಟ್ರಕ್‌ನಿಂದಲೇ ಅವಘಡ ಸಂಭವಿಸಿದೆ ಎಂದು ಆರೋಪಿಸಿದರು.

ಇದನ್ನೂ ಓದಿ | Road Accident | ಅತಿ ವೇಗ ತಂದು ಆಪತ್ತು; ಬೈಕ್‌ ಅಪಘಾತದಲ್ಲಿ ಯುವಕ ಸಾವು

Exit mobile version