Site icon Vistara News

Road Accident : ಏರು ಹತ್ತಲಾಗದೇ ಹಿಂದಕ್ಕೆ ಬಂದು ಕಾರಿನ ಮೇಲೆ ಬಿದ್ದ ಲಾರಿ; ಒಬ್ಬನ ಕಾಲು ನಜ್ಜುಗುಜ್ಜು

accident in kolar

ಚಿಕ್ಕಬಳ್ಳಾಪುರ: ಇಲ್ಲಿನ ವೀರದಿಮ್ಮಮ್ಮನ ಕಣಿವೆ ರಾಷ್ಟ್ರೀಯ ಹೆದ್ದಾರಿ 234ರ ಬಳಿ ಲಾರಿ ಮತ್ತು ಹೋಮ್ ಕೇರ್ ಕಾರಿನ ನಡುವೆ ಅಪಘಾತ (Road Accident) ಸಂಭವಿಸಿದ್ದು, ಕಾರಿನಲ್ಲಿದ್ದ ಒಬ್ಬರ ಕಾಲು ನಜ್ಜುಗುಜ್ಜಾಗಿದೆ. ಆದರೆ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಕಣಿವೆ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಓವರ್‌ಲೋಡ್ ತುಂಬಿದ್ದ ಲಾರಿ ರಸ್ತೆ ಹತ್ತಲು ಆಗದೆ ರಿವರ್ಸ್ ಎಳೆದಿದ್ದೇ ಅಪಘಾತಕ್ಕೆ ಕಾರಣವಾಗಿದೆ.

ಗೌರಿಬಿದನೂರಿನಿಂದ ಮೆಕ್ಕೆಜೋಳ ತುಂಬಿದ್ದ ಲಾರಿ ಬರುತ್ತಿತ್ತು. ಈ ವೇಳೆ ಓವರ್‌ಲೋಡ್‌ ಇದ್ದರಿಂದ ರಸ್ತೆಯ ಏರು ಹತ್ತಲು ಕಷ್ಟವಾಗಿದೆ. ಹೀಗಾಗಿ ನಿಯಂತ್ರಣಕ್ಕೆ ಸಿಗದೇ ಏಕಾಏಕಿ ಹಿಂಬದಿ ಬಂದಿದೆ. ಆಗ ವೈದ್ಯರ ತಂಡ ಬರುತಿದ್ದ ಹೋಮ್ ಕೇರ್ ಕಾರು ಹಿಂದಿನಿಂದ ಬರುತ್ತಿತ್ತು. ಕಾರಿನ ಚಾಲಕನಿಗೆ ಲಾರಿ ಗುದ್ದುವುದನ್ನು ತಪ್ಪಿಸಲು ಆಗಲಿಲ್ಲ. ಕಾರಿನ ಮೇಲೆ ಲಾರಿ ಬಿದ್ದಿದೆ. ಇದರಿಂದಾಗಿ ಹೋಮ್ ಕೇರ್ ಕಾರಿನಲ್ಲಿದ್ದ ಒಬ್ಬನ ಕಾಲು ನಜ್ಜುಗುಜ್ಜಾಗಿದೆ. ಹೀಗಾಗಿ ಲಾರಿಯಲ್ಲಿದ್ದ ಮೆಕ್ಕೆಜೋಳ ಮೂಟೆಗಳು ರಸ್ತೆಗೆ ಬಿದ್ದಿದ್ದು, ಮೂಟೆಗಳನ್ನು ಕದ್ದೊಯ್ಯಲು ಸಾರ್ವಜನಿಕರು ಮುಗಿಬಿದ್ದರು.

ಇದನ್ನೂ ಓದಿ | Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ!

Exit mobile version