Site icon Vistara News

Sanjay Dutt: ಕನ್ನಡದ ‘ಕೆ.ಡಿ’ ಸಿನಿಮಾ ಶೂಟಿಂಗ್‌ ವೇಳೆ ಸಂಜಯ್‌ ದತ್‌ಗೆ ಗಾಯ? ಸುದ್ದಿ ಅಲ್ಲಗಳೆದ ಅಧೀರ

Sanjay Dutt rubbishes baseless reports of getting injured on the sets of KD Kannada Movie

Sanjay Dutt rubbishes baseless reports of getting injured on the sets of KD Kannada Movie

ಬೆಂಗಳೂರು: ಕೆಜಿಎಫ್‌-ಚಾಪ್ಟರ್‌ 2 ಸಿನಿಮಾದ ಮೂಲಕ ಕರ್ನಾಟಕದ ಸಿನಿಪ್ರಿಯರ ಮನಗೆದ್ದಿರುವ ಬಾಲಿವುಡ್‌ ಖ್ಯಾತ ನಟ ಸಂಜಯ್‌ ದತ್‌ (Sanjay Dutt) ಅವರಿಗೆ ಧ್ರುವ ಸರ್ಜಾ ನಟನೆಯ ಕೆ.ಡಿ ಚಿತ್ರದ ಶೂಟಿಂಗ್‌ ವೇಳೆ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಗಡಿ ರಸ್ತೆಯ ಸೀಗೇನಹಳ್ಳಿಯಲ್ಲಿ ಶೂಟಿಂಗ್‌ ಮಾಡುವಾಗ ಸಂಜಯ್‌ ದತ್‌ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಆದರೆ, ಸಿನಿಮಾ ಶೂಟಿಂಗ್‌ ಬಳಿಕ ಸ್ಪಷ್ಟನೆ ನೀಡಿರುವ ಸಂಜಯ್‌ ದತ್, “ನನಗೆ ಗಾಯಗಳಾಗಿವೆ ಎಂಬ ವರದಿಯೇ ಸುಳ್ಳು” ಎಂದು ಟ್ವೀಟ್‌ ಮಾಡಿದ್ದಾರೆ.

“ನನಗೆ ಗಾಯಗಳಾಗಿವೆ ಎಂಬ ವರದಿ ಕೇಳಿಬಂದಿವೆ. ಆದರೆ, ಈ ವರದಿಗಳೆಲ್ಲ ಆಧಾರರಹಿತ ಎಂಬುದಾಗಿ ನಿಮಗೆಲ್ಲ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆ.ಡಿ ಸಿನಿಮಾ ಶೂಟಿಂಗ್‌ನಲ್ಲಿ ನಿರತನಾಗಿದ್ದು, ಇಡೀ ತಂಡವು ಹೆಚ್ಚಿನ ಕಾಳಜಿ ವಹಿಸುತ್ತಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು” ಎಂದು ಸಂಜಯ್‌ ದತ್‌ ಅವರು ಟ್ವೀಟ್‌ ಮೂಲಕ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೆಜಿಎಫ್‌-ಚಾಪ್ಟರ್‌ 2 ಚಿತ್ರದಲ್ಲಿ ಅಧೀರನ ಪಾತ್ರದ ಮೂಲಕ ಸಂಜಯ್‌ ದತ್‌ ಅವರು ಕರ್ನಾಟಕದಲ್ಲಿ ಮತ್ತಷ್ಟು ಮನೆಮಾತಾಗಿದ್ದಾರೆ. ಹಾಗಾಗಿ, ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಉತ್ಸುಕರಾಗಿದ್ದಾರೆ. ಸದ್ಯ ಅವರು ಪ್ರೇಮ್‌ ನಿರ್ದೇಶನ, ಧ್ರುವ ಸರ್ಜಾ ನಟನೆಯ ಕೆ.ಡಿ: ದಿ ಡೆವಿಲ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೆ.ಡಿ ಸಿನಿಮಾ ಕುರಿತು ಮಾತನಾಡಿದ ಅವರು, “ನಾನು ಕೆಜೆಎಫ್‌ ಸಿನಿಮಾದಲ್ಲಿ ನಟಿಸಿದ್ದೇನೆ. ಈಗ ಪ್ರೇಮ್‌ ನಿರ್ದೇಶನದಲ್ಲಿ ಕೆ.ಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಈ ಸಿನಿಮಾದಲ್ಲಿ ಇನ್ನಷ್ಟು ಉತ್ತಮವಾಗಿ ನಟಿಸಲು ಯತ್ನಿಸುತ್ತಿದ್ದೇನೆ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಹಾಗೆಯೇ, ನನಗೆ ದಕ್ಷಿಣ ಭಾರತದ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಇಚ್ಛೆ ಇದೆ” ಎಂದು ಅವರು ಹೇಳಿದ್ದಾರೆ.

ಕೆಜಿಎಫ್‌ 2 ಬಳಿಕ ಬಾಲಿವುಡ್‌ನಲ್ಲೂ ಸಂಜಯ್‌ ದತ್‌ ಅವರು ತುಂಬ ಬ್ಯುಸಿಯಾಗಿದ್ದಾರೆ. ಅಕ್ಷಯ್‌ ಕುಮಾರ್‌, ಸುನೀಲ್‌ ಶೆಟ್ಟಿ, ಪರೇಶ್‌ ರಾವಲ್‌ ನಟನೆಯ ಹೇರಾ ಫೇರಿ 2 ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದರಲ್ಲಿ ಅವರು ಅಂಧ ಡಾನ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Suniel Shetty: ಸುನೀಲ್‌ ಶೆಟ್ಟಿಗೆ ಅಮಿತಾಭ್‌ ಬಚ್ಚನ್‌, ಸಂಜಯ್‌ ದತ್ ʻಅಣ್ಣಾʼ ಅಂತ ಕರೆಯುವುದೇಕೆ?

Exit mobile version