Site icon Vistara News

Karnataka Election 2023: ಕಲಘಟಗಿಯಲ್ಲಿ ಸಂತೋಷ್ ಲಾಡ್ ಭರ್ಜರಿ ಪ್ರಚಾರ; ಬೈಕ್‌ ರ‍್ಯಾಲಿಗೆ ಭಾರಿ ಸ್ಪಂದನೆ

Santosh Lad campaigns in Kalaghatgi Huge response to bike rally Karnataka Election 2023 updates

ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನೂ 10 ದಿನ ಮಾತ್ರ ಬಾಕಿ ಇರುವ ಕಾರಣದಿಂದ ಅಭ್ಯರ್ಥಿಗಳು ತೀವ್ರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗೂ ಸುತ್ತಾಟ ನಡೆಸುತ್ತಿದ್ದಾರೆ. ಇದೇ ವೇಳೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ (Santosh Lad) ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ.

ತುಮರಿಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್‌ ಜಾಥಾ ನಡೆಸಿದ ಸಂತೋಷ್‌ ಲಾಡ್‌ ಅವರು ಭರ್ಜರಿ ಮತ ಬೇಟೆ ನಡೆಸಿದ್ದಾರೆ. ಅವರು ಹೋದಲ್ಲೆಲ್ಲ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಉತ್ತಮ ಸ್ವಾಗತ ದೊರೆತಿದೆ. ಸುಡು ಬಿಸಿಲನ್ನೂ ಲೆಕ್ಕಿಸದೇ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿದ ಸಂತೋಷ್‌ ಲಾಡ್‌ ಮತಯಾಚನೆ ನಡೆಸಿದರು.

ಕಲಘಟಗಿಯಲ್ಲಿ ಬೈಕ್‌ ರ‍್ಯಾಲಿ ನಡೆಸಿದ ಸಂತೋಷ್‌ ಲಾಡ್‌

ಆರತಿ ಬೆಳಗಿದ ಮಹಿಳೆಯರು

ಬೈಕ್ ಏರಿ ಗ್ರಾಮ ಸುತ್ತಿದ ಸಂತೋಷ್ ಲಾಡ್ ಅವರಿಗೆ ಪ್ರತಿ ಊರಿನಲ್ಲಿಯೂ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ಮಹಿಳೆಯರು ಎದುರುಗೊಂಡು ಹಣೆಗೆ ಕುಂಕುಮ ಹಚ್ಚಿ, ಆರತಿ ಬೆಳಗಿ ಈ ಬಾರಿಯ ಚುನಾವಣೆಯಲ್ಲಿ ಜಯ ಸಾಧಿಸುವಂತೆ ಆಶೀರ್ವದಿಸಿದರು.

ಕಲಘಟಗಿಯಲ್ಲಿ ಬೈಕ್‌ ರ‍್ಯಾಲಿಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು

ಇದನ್ನೂ ಓದಿ: Karnataka Election: ಲೂಟಿ ಸರ್ಕಾರ ಬಿಡಿ, ಪ್ರಾಮಾಣಿಕ ಕಾಂಗ್ರೆಸ್‌ಗೆ ಅಧಿಕಾರ ಕೊಡಿ: ಪ್ರಿಯಾಂಕಾ ಗಾಂಧಿ

ನನಗೆ ಒಂದು ಅವಕಾಶ ನೀಡಿ

ಅಧಿಕಾರ ಇರಲಿ, ಇರದಿರಲಿ ನಾನು ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ನನ್ನ ಸೇವಾ ಮನೋಭಾವವನ್ನು ನೋಡಿ ಆಶೀರ್ವಾದ ಮಾಡಿ. ಈ ಬಾರಿ ನನ್ನನ್ನು ಗೆಲ್ಲಿಸಿ, ಒಂದು ಅವಕಾಶ ನೀಡಿ. ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಶ್ರಮಿಸೋಣ ಎಂದು ಜನರಲ್ಲಿ ಸಂತೋಷ್ ಲಾಡ್‌ ಮನವಿ ಮಾಡಿದರು.

Exit mobile version