Site icon Vistara News

School Trip | ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಮೇಲೆ ಬಿತ್ತು ಬೃಹತ್‌ ಮರ; ಮೂವರಿಗೆ ಗಾಯ

School Trip tree fall

ಮಂಡ್ಯ: ಇಲ್ಲಿನ ಮೇಲುಕೋಟೆಯಲ್ಲಿ ಪ್ರವಾಸಕ್ಕಾಗಿ (School Trip) ಬಂದಿದ್ದ ವಿದ್ಯಾರ್ಥಿಗಳ ತಲೆ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ. ಮೇಲುಕೋಟೆಯ ಯೋಗ ನರಸಿಂಹಸ್ವಾಮಿ ದರ್ಶನಕ್ಕೆ ಬೆಟ್ಟ ಹತ್ತುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಮೂವರು ವಿದ್ಯಾರ್ಥಿಗಳು ಗಾಯಗಳಾಗಿದ್ದು, ಇವರಲ್ಲಿ ಒಬ್ಬ ವಿದ್ಯಾರ್ಥಿ ಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ.

School Trip ಮಕ್ಕಳ ತಲೆ ಮೇಲೆ ಬಿದ್ದ ಮರ

ನಂಜನಗೂಡು ಮೂಲದ ನಿಶಾಂತ್ ನಾಯಕ್, ವರುಣ್ ಮತ್ತು ಯೋಗೇಶ್ ಗಾಯಗೊಂಡವರು. ನಂಜನಗೂಡಿನ ಲಯನ್ಸ್ ಶಾಲೆ ವಿದ್ಯಾರ್ಥಿಗಳು ಶನಿವಾರ ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ಮರ ಬಿದ್ದಿದೆ. ಪರಿಣಾಮ ಒಬ್ಬ ವಿದ್ಯಾರ್ಥಿಯ ಕಾಲಿಗೆ ಗಂಭೀರ ಪೆಟ್ಟಾಗಿದ್ದರೆ, ಮತ್ತಿಬ್ಬರಿಗೆ ಮುಖದ ಮೇಲೆ ಗಾಯಗಳಾಗಿವೆ.

ಗಾಯಗೊಂಡ ಮೂವರು ವಿದ್ಯಾರ್ಥಿಗಳು

ಗಾಯಗೊಂಡವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮರವೂ ಒಣಗಿದ್ದ ಕಾರಣದಿಂದಾಗಿ ಕೆಳಗೆ ಬಿದ್ದು ಈ ಅವಘಡ ಸಂಭವಿಸಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಈ ಬಗ್ಗೆ ಆತಂಕಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಲ್ಲವೇ ಅರಣ್ಯ ಇಲಾಖೆಯವರು ಒಣ ಮರಗಳು, ರಂಬೆ, ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Ashika Ranganath | ಮದ್ಯದ ಬಾಟಲ್‌ನೊಂದಿಗೆ ಆಶಿಕಾ ರಂಪಾಟ: ನಿರ್ದೇಶಕ ಪವನ್‌ ಒಡೆಯರ್‌ ಹೇಳಿದ್ದೇನು?

Exit mobile version