Site icon Vistara News

Shivamogga News: ಶಿವಮೊಗ್ಗದಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದ 1 ವರ್ಷದ ಗಂಡು ಮಗು; ಉಸಿರುಗಟ್ಟಿ ಸಾವು

suicide symbolic

#image_title

ಶಿವಮೊಗ್ಗ: ಹೊಸನಗರ ತಾಲೂಕಿನ ಹೊಸಕೊಪ್ಪದಲ್ಲಿ ನೀರು ತುಂಬಿದ್ದ ಬಕೆಟ್‌ಗೆ 1 ವರ್ಷದ ಗಂಡು ಮಗು ಬಿದ್ದಿದ್ದು, ಮುಳುಗಿ ಮೃತಪಟ್ಟಿರುವ ದುರ್ಘಟನೆ (Shivamogga News) ನಡೆದಿದೆ. ಸಂಕೇತ್ (1) ಮೃತ ಮಗು.

ಗ್ರಾಮದ ಹರೀಶ್ ಹಾಗೂ ವೀಣಾ ದಂಪತಿ ತೋಟದ ಕೆಲಸಕ್ಕೆ ಹೋಗಿದ್ದಾಗ ಈ ಅವಘಡ ನಡೆದಿದೆ. ಮಗುವಿಗೆ ಆಗಾಗ ಬಕೆಟ್‌ಗೆ ನೀರು ತುಂಬಿಸಿ ಆಟವಾಡಲು ಬಿಡುತ್ತಿದ್ದರು. ಅದರಂತೆ ಮಂಗಳವಾರವೂ ನೀರು ತುಂಬಿದ ಬಕೆಟ್‌ಗೆ ಮಗು ಸಂಕೇತ್‌ ಆಟವಾಡಲು ಹೋಗಿದೆ.

ಈ ವೇಳೆ ಮಗು ತಲೆಕೆಳಗಾಗಿ ಬಿದ್ದಿದ್ದು, ಉಸಿರುಗಟ್ಟಿ ಮೃತಪಟ್ಟಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಹಿಳೆ ನೇಣಿಗೆ ಶರಣು

ಶಿವಮೊಗ್ಗದ ಗಾಂಧಿನಗರ ನಿವಾಸಿ ಶ್ವೇತಾ ಪ್ರಶಾಂತ ಎಂಬುವವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ನೇಣು ಬಿಗಿದುಕೊಂಡಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಅಡಿಕೆ ವ್ಯವಹಾರ ನಡೆಸುವ ಪ್ರತಿಷ್ಠಿತ ಮನೆತನದ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: Old Pension: ನಿವೃತ್ತ ಶಿಕ್ಷಕ ವಿಷ ಸೇವಿಸಿ ಆತ್ಮಹತ್ಯೆ; ಮೃತನ ಕುಟುಂಬಕ್ಕೆ 2 ಲಕ್ಷ ರೂ. ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಇನ್ನು ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಕಿಡ್ಸ್‌ ಕಾರ್ನರ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version