Site icon Vistara News

Shivamogga News | ಆನೆ ಬಿಡಾರಕ್ಕಾಗಿ ಸೊಪ್ಪು ಕೀಳುವಾಗ ಮರದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Shivamogga news

ಶಿವಮೊಗ್ಗ: ಇಲ್ಲಿನ ಭದ್ರಾವತಿ ತಾಲೂಕಿನ ಬಿಸಿಲುಮನೆ ಬಳಿ ವ್ಯಕ್ತಿಯೊಬ್ಬ ಮರದಿಂದ ಸೊಪ್ಪು ಕೀಳಲು ಹೋಗಿ ಕೆಳಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು (Shivamogga News) ಮೃತಪಟ್ಟಿದ್ದಾರೆ. ಕುಮರಿ ನಾರಾಯಣಪುರ ಗ್ರಾಮದ ಬಸವರಾಜಪ್ಪ (48) ಮೃತ ವ್ಯಕ್ತಿ.

ಸಕ್ಕರೆಬೈಲು ಆನೆ ಬಿಡಾರಕ್ಕೆ ಸೊಪ್ಪು ರವಾನಿಸುವ ಗುತ್ತಿಗೆ ಪಡೆದಿದ್ದ ಮಂಜುನಾಥ ಅವರ ಬಳಿ ಕೆಲಸಕ್ಕಾಗಿ ಬಸವರಾಜಪ್ಪ ತೆರಳಿದ್ದರು. ಮಂಜುನಾಥ್‌ ಮುಂಜಾಗ್ರತಾ ಕ್ರಮ‌ ಕೈಗೊಳ್ಳದೇ ಮರ ಹತ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್‌ ನಟಿ ಬಿಪಾಶಾ ಬಸು

Exit mobile version