Site icon Vistara News

Assault on woman | ರಸ್ತೆ ಮೇಲೆ ಹಾಕಿದ್ದ ಅಡಕೆ ಸಿಪ್ಪೆ ತೆಗೆದಿಲ್ಲ ಎಂದು ಜಗಳ ತೆಗೆದು ಮಹಿಳೆಯ ಮೇಲೆ ಹಲ್ಲೆ

Ittakki Village Assault on woman

ಹೊಸನಗರ: ರಸ್ತೆ ಮೇಲೆ ಹಾಕಿದ್ದ ಅಡಕೆ ಸಿಪ್ಪೆ ತೆಗೆದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ತಲೆಗೆ ಹಲ್ಲೆ (Assault on woman) ಮಾಡಿರುವ ಘಟನೆ ತಾಲೂಕಿನ ಇಟ್ಟಕ್ಕಿ ಗ್ರಾಮದಲ್ಲಿ ಬುಧವಾರ (ಡಿ.೨೧) ನಡೆದಿದೆ.

ಭಾಗೀರಥಿ (45) ಎಂಬುವವರು ಬೇರೆ ಕಡೆಗಳಿಂದ ಹಸಿ ಅಡಕೆ ತರಿಸಿಕೊಂಡು ಮಿಷನ್ ಮೂಲಕ ಅಡಕೆ ಸುಲಿಯುವುದು ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಸುಲಿದ ಅಡಕೆ ಸಿಪ್ಪೆಯನ್ನು ಮನೆಯ ಮುಂದಿನ ರಸ್ತೆಯಲ್ಲಿ ಹರಡಿರುತ್ತಾರೆ. ಬುಧವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಅದೇ ಗ್ರಾಮದ ವಾಸಿ ಧರ್ಮರಾವ್ ಎಂಬಾತ ತನ್ನ ಜಾನುವಾರು ಸಹಿತ ಭಾಗೀರಥಿ ಮನೆ ಮುಂದೆ ಸಾಗುವಾಗ, ಏಕಾಏಕಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ರಸ್ತೆಯಿಂದ ಇನ್ನೂ ಅಡಕೆ ಸಿಪ್ಪೆ ಏಕೆ ತೆಗೆದಿಲ್ಲ ? ಎಂದು ಪ್ರಶ್ನಿಸಿ, ಭಾಗೀರಥಿ ತಲೆಗೆ ದೊಣ್ಣೆಯಿಂದ ಗಂಭೀರ ಹಲ್ಲೆ ಮಾಡಿದನು.

ಇದನ್ನೂ ಓದಿ | Communal harmony | ಧರ್ಮದಂಗಲ್‌ ನಡುವೆ ಸಾಮರಸ್ಯದ ಸಂಭ್ರಮ: ಗಂಗಾವತಿ ದುರ್ಗಮ್ಮನ ಜಾತ್ರೆಯಲ್ಲಿ ಮುಸ್ಲಿಂ ಭಕ್ತರು

ಇದೇ ವೇಳೆಗೆ ಅಡುಗೆ ತಯಾರಿಕೆಗಾಗಿ ರುಬ್ಬಿದ್ದ ಖಾರವನ್ನು ಭಾಗೀರಥಿಯು ಆರೋಪಿ ಮುಖಕ್ಕೆ ಎಸೆದರು. ಅಷ್ಟರಲ್ಲಿ ಗಲಾಟೆ ಸದ್ದು ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರ ಸಹಾಯದಿಂದ ಗಾಯಾಳು ಮಹಿಳೆಯನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರು.

ಗಾಯಾಳು ಭಾಗೀರಥಿ ನೀಡಿದ ದೂರನ ಮೇರೆಗೆ ಹೊಸನಗರ ಠಾಣೆಯಲ್ಲಿ ಐಪಿಸಿ ಕಾಯ್ದೆ 504, 324 ಕಲಂ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಕೊಂಡು, ಪರಾರಿಯಾಗಿರುವ ಆರೋಪಿ ಧರ್ಮರಾವ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | Kirti Azad | ಮೋದಿ ಧರಿಸಿದ್ದ ಉಡುಗೆ ಮಹಿಳೆಯದ್ದಾ, ಪುರುಷರದ್ದಾ: ಕೀರ್ತಿ ಆಜಾದ್, ಭುಗಿಲೆದ್ದ ವಿವಾದ

Exit mobile version