Site icon Vistara News

Firing Case | ಕೈಯಲ್ಲಿದ್ದ ನಾಡಬಂದೂಕು ಮಿಸ್‌ ಫೈರ್‌; ಗುಂಡು ಎದೆಗೆ ಹೊಕ್ಕಿ ರೈತ ಸಾವು

Firing Case

ಶಿವಮೊಗ್ಗ: ಇಲ್ಲಿನ ಹೊಸನಗರ ತಾಲೂಕಿನ ನಗರ ಠಾಣಾ ವ್ಯಾಪ್ತಿಯಲ್ಲಿ ತೋಟಕ್ಕೆ ಬರುತ್ತಿದ್ದ ಕಾಡು ಪ್ರಾಣಿಗಳನ್ನು ಓಡಿಸಲು ಹೋಗಿ ತನ್ನದೇ ಬಂದೂಕಿಗೆ (Firing Case) ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಅಂಡಗದೋದೂರು ಗ್ರಾ.ಪಂ ವ್ಯಾಪ್ತಿಯ ನೇಗಿಲೋಣಿ ಗ್ರಾಮದ ನಿವಾಸಿ ಅಂಬರೀಷ್‌ ಮೃತ ದುರ್ದೈವಿ.

ಅಂಬರೀಷ್‌ ಶನಿವಾರ ರಾತ್ರಿ ಊಟ ಮುಗಿಸಿಕೊಂಡು ನಾಡಬಂದೂಕು ಹಿಡಿದು ಸ್ನೇಹಿತ ಕೀರ್ತಿ ಎಂಬುವವರ ಜತೆ ತೋಟಕ್ಕೆ ಹೋಗಿದ್ದರು. ಈ ವೇಳೆ ಕೀರ್ತಿ ಮೊದಲೇ ಮನೆಗೆ ಬಂದರೆ, ಅಂಬರೀಷ್​ ಸ್ವಲ್ಪ ತಡವಾಗಿ ಮನೆಗೆ ಹೊರಟಿದ್ದರು.

ಅಂಬರೀಷ್‌ ಬಂಡೆಯೊಂದರಿಂದ ಕೆಳಕ್ಕೆ ಇಳಿಯುವಾಗ, ಕಾಲು ಜಾರಿ ಕೆಳಕ್ಕೆ ಬಿದ್ದರು. ಈ ವೇಳೆ ಕೈಯಲ್ಲಿದ್ದ ಬಂದೂಕಿನ ಟ್ರಿಗರ್​ ಪ್ರೆಸ್​ ಆಗಿ ನೇರವಾಗಿ ಅಂಬರೀಷ್​ ಎದೆಗೆ ಫೈರ್‌ ಆಯಿತು. ಎದೆಗೆ ಹೊಕ್ಕಿದ ಗುಂಡಿನಿಂದ ರಕ್ತಸ್ತ್ರಾವವಾಗಿ ಅಂಬರೀಷ್ ಸ್ಥಳದಲ್ಲಿಯೇ​ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ | ಅವರನ್ನು ಎಳೆದು ತಂದು ಫೈರ್‌ ಮಾಡೋಕೆ ಆಗುತ್ತಾ?: ಹರ್ಷ ಆರೋಪಿಗಳ ಕುರಿತು ಆರಗ ಜ್ಞಾನೇಂದ್ರ

Exit mobile version