ಶಿವಮೊಗ್ಗ: ಭದ್ರಾವತಿಯಲ್ಲಿ ಎರಡು ಕೋಮುಗಳ ಯುವಕರ ನಡುವಿನ ಗಲಾಟೆ (Group clash in Bhadravathi) ಪ್ರಕರಣದಲ್ಲಿ 6 ಮಂದಿಯನ್ನು (Accused arrested) ಪೊಲೀಸರು ಬಂಧಿಸಿದ್ದು, ವಿಚಾರಣೆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭದ್ರಾವತಿಯ ನೆಹರು ನಗರ ನಿವಾಸಿಗಳಾದ ಹರೀಶ್ (22), ಗೌತಮ್ (22), ಸಿದ್ದಾಪುರ ಹೊಸೂರು ಗ್ರಾಮದ ಜಹೀರ್ (27), ಎಕಿನ್ಸಾ ಕಾಲನಿಯ ಅಸ್ಲಾಂ ಅಲಿಯಾಸ್ ಅಸ್ಲಿ (29), ಹೊಸಮನೆ ನಿವಾಸಿಗಳಾದ ಮಂಜುನಾಥ (24), ಅಶೋಕ್ (22) ಬಂಧಿತರು.
ನ.13ರಂದು ಭದ್ರಾವತಿಯ ಜ್ಯೂನಿಯರ್ ಕಾಲೇಜ್ ಬಳಿ ಜಹೀರ್, ಅಸ್ಲಾಮ್ ಹಾಗೂ ಹರೀಶ್, ಗೌತಮ್ ಎಂಬುವವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅರವಿಂದ್, ಗೌತಮ್, ಹರೀಶ್ ಹಾಗೂ ರಿಜ್ವಾನ್ ಎಂಬುವವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗ ದಾಖಲಿಸಲಾಗಿತ್ತು. ನಂತರ ಜಹೀರ್ ಮತ್ತು ಹರೀಶ್ ಹೊಸಮನೆ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು. ಬಳಿಕ ಹಳೇ ನಗರ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ | ಭದ್ರಾವತಿಯಲ್ಲಿ 2 ಕೋಮುಗಳ ನಡುವೆ ಗಲಾಟೆ; ಹರಿತ ಆಯುಧಗಳಿಂದ ಹಲ್ಲೆ, ನಾಲ್ವರಿಗೆ ಗಾಯ