Site icon Vistara News

Siddheshwar Swamiji | ನಡೆದಾಡುವ ದೇವರಿಗೆ ಕ್ರೀಡೆಯಲ್ಲೂ ಅಷ್ಟೇ ಆಸಕ್ತಿ ಇತ್ತು: ಯುವಕರೊಂದಿಗೆ ಚೆಂಡಿನಾಟದ ವಿಡಿಯೊ ವೈರಲ್‌

ವಿಜಯಪುರ: ಜ್ಞಾನಯೋಗಿ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ (Siddheshwar Swamiji) ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಲಕ್ಷಾಂತರ ಜನರ ಮನಸ್ಸಿನಲ್ಲಿ ಅಳವಾಗಿ ಉಳಿದಿರುವ ಸ್ವಾಮೀಜಿಯವರು ಯುವಕರೊಂದಿಗೆ ಚೆಂಡಿನ ಆಟದ ವಿಡಿಯೊ ವೈರಲ್ ಆಗಿದೆ. ‌

ಯುವಕರೊಂದಿಗೆ ಹಾಯಾಗಿ ಚೆಂಡಿನಾಟವಾಡಿ ಕ್ರೀಡಾ ಮನೋಭಾವ ಮೆರೆದಿದ್ದ ಸಿದ್ದೇಶ್ವರ ಸ್ವಾಮೀಜಿಯವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಕ್ಟೋಬರ್ 12ರಿಂದ ನವೆಂಬರ್ 12ವರೆಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ತಮ್ಮ ಕೊನೆಯ ಪ್ರವಚನ ನೀಡಿದ್ದರು. ಬಳಿಕ ಕಾಖಂಡಕಿ ಗ್ರಾಮದಲ್ಲಿ ತಂಗಿದ್ದ ವೇಳೆ ಯುವಕರೊಂದಿಗೆ ತಾವು ಚೆಂಡಿನಾಟ ಆಡಿದ್ದರು.

ಪ್ರವಚನ ಮುಕ್ತಾಯವಾದ ಮೇಲೆ ವಿಶ್ರಾಂತಿ ವೇಳೆ ಯುವಕರೊಂದಿಗೆ ಚೆಂಡಿನಾಟವನ್ನು ಅಮೃತಾನಂದ ಸ್ವಾಮೀಜಿ ಭಕ್ತರು ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಾಖಂಡಕಿ ಗ್ರಾಮದ ತಿಂಗಳ ಪ್ರವಚನ ಬಳಿಕ ಅನಾರೋಗ್ಯದಿಂದ ಪ್ರವಚನ ನೀಡುವುದನ್ನು ಬಿಟ್ಟಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜನವರಿ 2ರಂದು ದೇಹಾಂತ್ಯ ಮಾಡಿದರು.

ಇದನ್ನೂ ಓದಿ | Siddheshwar Swamiji : ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ, ನಾವೇ ವಿಸರ್ಜನೆ ಮಾಡುತ್ತೇವೆ: ಬಸವಲಿಂಗ ಶ್ರೀ

Exit mobile version