Site icon Vistara News

Sindhuri Vs Roopa : Get well soon; ರೂಪಾಗೆ ರೋಹಿಣಿ ತಿರುಗೇಟು; ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಸಿಂಧೂರಿ ದಂಪತಿ

Sudheer reddy Sindhuri

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿಯಾಗಿರುವ ಡಿ. ರೂಪಾ ಅವರು ಮಾಡಿರುವ ಆರೋಪ, ವೈಯಕ್ತಿಕ ತೇಜೋವಧೆಗಳಿಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲು ರೋಹಿಣಿ ಸಿಂಧೂರಿ ದಂಪತಿ ಮುಂದಾಗಿದ್ದಾರೆ. ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಡಿ. ರೂಪಾ ಅವರ ವಿರುದ್ಧ ದೂರು ನೀಡುವುದಕ್ಕಾಗಿ ಬಾಗಲಕುಂಟೆ ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

ಈ ನಡುವೆ, ಕರಕುಶಲ ನಿಗಮದ ವ್ಯವಸ್ಥಾಪನಾ ನಿರ್ದೇಶಕರಾಗಿರುವ ರೋಹಿಣಿ ಸಿಂಧೂರಿ ಅವರು ಸೋಮವಾರ ತಮ್ಮ ಕಚೇರಿಗೆ ತೆರಳಿ ಕರ್ತವ್ಯ ನಿರತರಾಗಿದ್ದಾರೆ. ಕಚೇರಿಗೆ ತೆರಳುವ ಮುನ್ನ ಅವರು ಕಳೆದ ಎರಡು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಮುಖಾಮುಖಿ ಆಗಿದ್ದು ʻಗೆಟ್‌ ವೆಲ್‌ ಸೂನ್‌ʼ ಎಂದು ಡಿ. ರೂಪಾ ಅವರಿಗೆ ಸಂದೇಶ ರವಾನಿಸಿದ್ದಾರೆ.

ʻಪರ್ಸನಲ್‌ ವಿಚಾರದಲ್ಲಿ ಮಾತನಾಡಿದರೆ ಹೇಗೆ? ನಾವು ಬಿಡೋದಿಲ್ಲ. ಪೊಲೀಸರ ಮೂಲಕ ಕಾನೂನು ಹೋರಾಟ ಮಾಡುತ್ತೇವೆʼʼ ಎಂದು ಕಚೇರಿಗೆ ತೆರಳುವ ಮುನ್ನ ರೋಹಿಣಿ ಅವರು ಹೇಳಿದರು. ಅದರ ಜತೆಗೆ ಡಿ. ರೂಪಾ ಅವರಿಗೆ ಗೆಟ್‌ ವೆಲ್‌ ಸೂನ್‌ ಎಂದು ಹೇಳಿದ್ದರು.

ಡಿ. ರೂಪಾ ಅವರು ಮಾಡಿದ ಸರಣಿ ಆರೋಪಗಳಿಗೆ ಭಾನುವಾರ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ಅವರು ʻಡಿ. ರೂಪಾಗೆ ಮಾನಸಿಕ ಸಮಸ್ಯೆ ಇದೆʼʼ ಎಂದು ಹೇಳಿದ್ದರು. ಈಗ ಅದರಿಂದ ಹೊರಬನ್ನಿ ಎಂದು ಹೇಳುವ ಮೂಲಕ ಮತ್ತೆ ಅದೇ ವಿಚಾರವನ್ನು ನೆನಪಿಸಿದ್ದಾರೆ.

ಪೊಲೀಸರಿಗೆ ದೂರು ನೀಡಲಿರುವ ಸುಧೀರ್‌ ರೆಡ್ಡಿ

ರೋಹಿಣಿ ಅವರ ವಿಚಾರದಲ್ಲಿ ಹಲವು ಬಾರಿ ವಿವಾದಗಳು ಎದುರಾದರೂ ಎಂದೂ ಪ್ರತಿಕ್ರಿಯಿಸದ ಸುಧೀರ್‌ ರೆಡ್ಡಿ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ ಸಿಂಧೂರಿ ಪತಿ ಸುಧೀರ್‌ ರೆಡ್ಡಿ, ಡಿ. ರೂಪಾ ಅವರ ಪರ್ಸನಲ್‌ ಅಜೆಂಡಾ ಏನಿದೆ ಅಂತ ಗೊತ್ತಾಗಬೇಕು. ಸಿಂಧೂರಿ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗಬೇಕು. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು ಎಂದು ಸುಧೀರ್‌ ಹೇಳಿದರು.

೨೦೧೩-೧೪ರಲ್ಲಿ ತೆಗೆದ ಪೋಟೊಗಳನ್ನು ತೆಗೆದು ಈಗ ವೈರಲ್‌ ಮಾಡಿದ್ದಾರೆ. ಮೂರು ಜನ ಐಎಎಸ್ ಅಧಿಕಾರಿಗಳಿಗೆ ಫೋಟೊ ಕಳುಹಿಸಲಾಗಿದೆ ಅಂತ ಹೇಳಿದ್ದಾರೆ. ಆ ಮೂವರು ಐಎಎಸ್‌ ಅಧಿಕಾರಿಗಳು ಯಾರು ಎನ್ನುವುದನ್ನು ಅರು ಹೇಳಲಿ ಎಂದು ಸವಾಲು ಹಾಕಿದರು.

ʻʻಔಟ್ ಆಫ್ ಕಂಟೆಸ್ಟ್‌ ಫೋಟೊ ಯಾಕೆ ತೆಗೆದು ವೈರಲ್ ಮಾಡಿದ್ದಾರೆ. ನಾವು ಈ ಫೋಟೊಗಳನ್ನು ಯಾರಿಗೂ ಶೇರ್‌ ಮಾಡಿಲ್ಲ. ಹಾಗಿದ್ದರೂ ಇವರಿಗೆ ಹೇಗೆ ಸಿಕ್ಕಿದೆ. ಪೊಲೀಸ್‌ ಅಧಿಕಾರಿಯಾಗಿರುವ ಇವರು ಈ ರೀತಿ ಕಳ್ಳ ಮಾರ್ಗದಿಂದ ಫೋಟೊಗಳನ್ನು ಪಡೆದಿರಲೂಬಹುದು. ರೋಹಿಣಿ ಅವರು ತಮ್ಮ ಸಿಸ್ಟರ್ ಬಳಿ ಹೇರ್ ಕಟ್ ಮಾಡಿಸಿರುವ ಫೋಟೊವನ್ನು ಕೂಡಾ ವೈರಲ್‌ ಮಾಡಿದ್ದಾರೆʼʼ ಎಂದಿದ್ದಾರೆ ಸುಧೀರ್‌ ರೆಡ್ಡಿ.

ʻʻನಾನು ಯಾವತ್ತೂ ಮಾಧ್ಯಮದ ಮುಂದೆ ಬಂದಿಲ್ಲ. ನಮ್ಮ ಕುಟುಂಬದ ಬಗ್ಗೆ ತೀರಾ ಪರ್ಸನಲ್ ಇರೋದರಿಂದ ಮಾಧ್ಯಮದ ಮುಂದೆ ಬಂದಿದ್ದೇನೆ. ರೂಪಾ ಅವರಿಗೆ ರೋಹಿಣಿ ಸಿಂಧೂರಿ ಮೇಲೆ ಜಲಸಿ ಇದೆ. ನನಗಿಂತ ೧೦ ವರ್ಷ ಜ್ಯೂನಿಯರ್‌ ಆಗಿರೋಳು ಇಷ್ಟು ಹೆಸರು ಮಾಡಿದ್ದಾರೆ ಅನ್ನೋ ಸಿಟ್ಟು ಇದೆ. ಹೀಗಾಗಿ ಅವರು ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡುತ್ತೇನೆ ಎಂದು ಸುಧೀರ್‌ ರೆಡ್ಡಿ ತಿಳಿಸಿದ್ದು, ಅದರಂತೆ ಬಾಗಲಗುಂಟೆ ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

ಇದನ್ನೂ ಓದಿ : Sindhuri Vs Roopa : ಡಿ. ರೂಪಾ ವಿರುದ್ಧ ಸಿಟ್ಟಿಗೆದ್ದ ರೋಹಿಣಿ ಸಿಂಧೂರಿ ಅಭಿಮಾನಿಗಳು, 9 ಪ್ರಶ್ನೆ ಮೂಲಕ ಎಚ್ಚರಿಕೆ

Exit mobile version