Site icon Vistara News

Sirsi News: ರಾಜಸ್ಥಾನದ ಜೋಧಪುರದ ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ ಶರತ್ ಮಂಜುನಾಥ ಕೊಠಾರಿ ಆಯ್ಕೆ

Sharath Manjunath Kothari selected as Scientist at Jodhpur Rajasthan Dry Forest Research Institute

ಶಿರಸಿ: ತಾಲೂಕಿನ ಕೊಡ್ನಗದ್ದೆಯ ಹೊನ್ನೆಹಕ್ಕಲಿನ ಶರತ್ ಮಂಜುನಾಥ ಕೊಠಾರಿ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಡಿ ಬರುವ ರಾಜಸ್ಥಾನದ (Rajasthan) ಜೋಧಪುರದ (Jodhpur) ಶುಷ್ಕ ಅರಣ್ಯ ಸಂಶೋಧನಾ ಸಂಸ್ಥೆಗೆ ವಿಜ್ಞಾನಿಯಾಗಿ (Scientist) ಆಯ್ಕೆಯಾಗಿದ್ದಾರೆ.

ಕೃಷಿಕ ಮಂಜುನಾಥ ಕೊಠಾರಿ ಹಾಗೂ ಸಾವಿತ್ರಿ ದಂಪತಿಯ ಪುತ್ರನಾದ ಇವರು, ಹಾಸನ ಕೃಷಿ ವಿದ್ಯಾಲಯದಿಂದ ಪದವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಕೃಷಿ ಮಣ್ಣು ಹಾಗೂ ಕೃಷಿ ರಸಾಯನ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶರತ್ ಮಂಜುನಾಥ ಕೊಠಾರಿ ಅವರು ICAR-JRF ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದು ಶಿಷ್ಯವೇತನ ಪಡೆದಿದ್ದಾರೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ನ್ಯಾನೋಕ್ಲೆಬಯೋಪಾಲಿಮರ್ ರಾಸಾಯನಿಕ ಗೊಬ್ಬರಗಳ ಮೇಲೆ ನಡೆಸಿದ ಸಂಶೋಧನೆಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಚಿನ್ನದ ಪದಕ ಹಾಗೂ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆಯ ಚಿನ್ನದ ಪದಕವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Asian Games: ಆರ್ಚರಿಯಲ್ಲಿ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ

ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇಂದ ಚಿನ್ನದ ಪದಕದ ಜತೆ ಒಟ್ಟು 13 ಚಿನ್ನದ ಪದಕಗಳೊಂದಿಗೆ 2019 ರಲ್ಲಿ ಕೃಷಿ ಪದವಿ ಪಡೆದಿದ್ದಾರೆ. ಇದೀಗ ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದು, ಇವರ ಈ ಸಾಧನೆಗೆ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version