Site icon Vistara News

Snake bite | ಹಾವು ಕಚ್ಚಿ ಮೆದುಳು ನಿಷ್ಕ್ರಿಯಗೊಂಡು ಉರಗ ರಕ್ಷಕ ಸ್ನೇಕ್ ಲೋಕೇಶ್ ಸಾವು

snake lokesh

ಬೆಂಗಳೂರು: ನಾಗರಹಾವು ಹಿಡಿಯಲು ಹೋದ ವೇಳೆ ಹಾವು ಕಡಿದು (Snake bite) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉರಗ ರಕ್ಷಕ ಸ್ನೇಕ್ ಲೋಕೇಶ್ ಮೆದುಳು ನಿಷ್ಕ್ರಿಯಗೊಂಡು ಮಂಗಳವಾರ (ಆ.23) ಕೊನೆಯುಸಿರೆಳೆದಿದ್ದಾರೆ.

ನೆಲಮಂಗಲ ನಗರ ಮಾರುತಿ ಬಡಾವಣೆ ನಿವಾಸಿಯಾಗಿದ್ದ ಲೋಕೇಶ್‌ ಅವರಿಗೆ ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಕಳೆದ ಬುಧವಾರ ದಾಬಸ್‌ಪೇಟೆಯಲ್ಲಿ ನಾಗರಹಾವು ಹಿಡಿಯಲು ಹೋದಾಗ ಹಾವು ಮೂಟೆ ಕೆಳಗೆ ಅವಿತುಕೊಂಡಿತ್ತು. ಅದನ್ನು ಅಲ್ಲಿಂದ ರಕ್ಷಿಸಲು ಹೋದಾಗ ಹಾವು ಕಚ್ಚಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

Exit mobile version